ಅದ್ಯಾವುದೋ ಪನ್ನೀರ ಕೊಳ
ಅಲ್ಯಾವುದೋ ಬಿಳಿಹಂಸಜೋಡಿ
ಮತ್ತೆ ಮತ್ತೆ ಮುತ್ತಿಕ್ಕುತ್ತಿದೆ ಗೊತ್ತಿಲ್ಲ
ಆರ್ಥಿಕ ಹೊಡೆತ, ಬೆಲೆಯೇರಿಕೆಗಳ ಮಾರಿ
ಪನ್ನೀರನ್ನೂ ಕಲಕುತ್ತೆ,ಹಂಸದ ಬಣ್ಣ ಬದಲಿಸುತ್ತೆ
ಅದ್ಯಾವನೋ ಊರ ಡೊಂಕ ತಿದ್ದುವ
ಭ್ರಮೆಯ ಹಮ್ಮು ಬಿಮ್ಮಿನ ಲೇಖನಿಗ,
ಅಲ್ಯಾವುದೋ ಕುಟುಂಬ ಅವನ ನಿರೀಕ್ಷೆಯಲ್ಲಿ
ಗೊತ್ತುಂಟು ಅವನಿಗೂ,ಬಳಗಕ್ಕೂ ಬೆಲೆಯೇರಿದರೂ
ಕಿಸೆ ಭರ್ತಿಯಾಗುವುದಿಲ್ಲ, ಹಾಲುಗಲ್ಲದ ಕಂದಮ್ಮ
ಚಿನ್ನದ ಪುಟ್ಟ ಓಲೆಯ ಮಾತಾಡುವುದರ ಕೇಳುವ
ಧೈರ್ಯ ಅವನಿಗೆಲ್ಲಿ, ಊರಿಗಿಡೀ ಪ್ರಕಾಶಿಸುವ
ದೀಪದ ಕೆಳಗೆ ಕತ್ತಲೇ ತಾನೇ?
ಗುಲಾಮನೂ ದೊರೆಯಾದರೆ ಅವನು ದೊರೆಯಂತೇ
ಆಡುವ ಆದರೆ ಮತ್ತೊಬ್ಬ ನವಗುಲಾಮ ಹುಟ್ಟುತ್ತಾನೆ
ಇದು ಜಗಜೀವನ, ಇಲ್ಲೇನಿದೆ ಬರಿ ಕತ್ತಲು,
ಅಲ್ಲಲ್ಲ ದೊಡ್ಡ ದೊಡ್ಡ ಸೋಡಿಯಂ ದೀಪಗಳು!
Tuesday, March 10, 2009
Friday, February 27, 2009
ನನ್ನೊಳಗಿನ ಪ್ರಶ್ನೋತ್ತರ
ಹೀಗೊಂದು ಸಮಸ್ಯೆ
ನಾವೇನು? ದೇವನಿರ್ಮಿತರೇ,
ಹಾಗಾದರೆ ನಾವೆಲ್ಲರೂ ಪರಿಪೂರ್ಣರೇ?
ಕಾಮ, ಕ್ರೋಧಾದಿಗಳು ನಮ್ಮಲ್ಲೂ ಇಲ್ಲವೇ
ದೇವನಿರ್ಮಿತವಲ್ಲವೂ ಪರಿಪೂರ್ಣವೆಂದಾದರೆ
ಮಾನವನೂ ಸಂಪೂರ್ಣ ಅಲ್ಲವೇ?
ದೇವನೊಬ್ಬ ನಾಮ ಹಲವು ಎಂದಾದರೆ
ಈ ವಿರೋಧಾಭಾಸ ಯಾಕೆ ಅಲ್ಲವೇ?
*********
ಹೀಗೊಂದು ಸಮಾಧಾನ
ಸಭ್ಯತೆಯ ಮುಸುಕಿಗೆ ಅಸಭ್ಯತೆಯ ಸೋಂಕು
ಬಡಿಬಡಿದು ರಾಚಿದಾಗ, ಹೆದರಿಕೆ ಸತ್ತು
ಮಸಣ ಸೇರಿದಾಗ ಉಂಟಾದ ತಥ್ಯ ದೇವರಿದ್ದಾನೆ
ಅವನಿಗಾದರೂ ಅಂಜು,ನಾಚಿಕೆಪಡು, ಅವನಿಂದ
ನಿರ್ಮಿಸಲ್ಪಟ್ಟ ನಾವು ಅವನಂತೆ ಪರಿಪೊರ್ಣರಲ್ಲ
ಏಕೆಂದರೆ ಕಾಮ, ಕ್ರೋಧಾದಿಗಳು ನಮ್ಮನ್ನು ಬಿಡುವುದಿಲ್ಲ
ಅದಕ್ಕಾಗೇ ಇಸ್ಟೋಂದು ದೇವರಲ್ಲಿ ಯಾರನ್ನಾದರೂ ನಂಬು
ನಾವೇನು? ದೇವನಿರ್ಮಿತರೇ,
ಹಾಗಾದರೆ ನಾವೆಲ್ಲರೂ ಪರಿಪೂರ್ಣರೇ?
ಕಾಮ, ಕ್ರೋಧಾದಿಗಳು ನಮ್ಮಲ್ಲೂ ಇಲ್ಲವೇ
ದೇವನಿರ್ಮಿತವಲ್ಲವೂ ಪರಿಪೂರ್ಣವೆಂದಾದರೆ
ಮಾನವನೂ ಸಂಪೂರ್ಣ ಅಲ್ಲವೇ?
ದೇವನೊಬ್ಬ ನಾಮ ಹಲವು ಎಂದಾದರೆ
ಈ ವಿರೋಧಾಭಾಸ ಯಾಕೆ ಅಲ್ಲವೇ?
*********
ಹೀಗೊಂದು ಸಮಾಧಾನ
ಸಭ್ಯತೆಯ ಮುಸುಕಿಗೆ ಅಸಭ್ಯತೆಯ ಸೋಂಕು
ಬಡಿಬಡಿದು ರಾಚಿದಾಗ, ಹೆದರಿಕೆ ಸತ್ತು
ಮಸಣ ಸೇರಿದಾಗ ಉಂಟಾದ ತಥ್ಯ ದೇವರಿದ್ದಾನೆ
ಅವನಿಗಾದರೂ ಅಂಜು,ನಾಚಿಕೆಪಡು, ಅವನಿಂದ
ನಿರ್ಮಿಸಲ್ಪಟ್ಟ ನಾವು ಅವನಂತೆ ಪರಿಪೊರ್ಣರಲ್ಲ
ಏಕೆಂದರೆ ಕಾಮ, ಕ್ರೋಧಾದಿಗಳು ನಮ್ಮನ್ನು ಬಿಡುವುದಿಲ್ಲ
ಅದಕ್ಕಾಗೇ ಇಸ್ಟೋಂದು ದೇವರಲ್ಲಿ ಯಾರನ್ನಾದರೂ ನಂಬು
Friday, February 20, 2009
ಇಂಥವರೂ ಇದ್ದಾರೆ
ಅದು ಬಂಟ್ವಾಳ ರೈಲ್ವೇ ನಿಲ್ದಾಣ.
ದಿನಕ್ಕೆ ಎರಡು ಪ್ರಯಾಣಿಕರ ರೈಲು ಓಡಾಡುವಾಗ ಜನಸೇರುವುದನ್ನು ಬಿಟ್ಟರೆ ಮತ್ತಲ್ಲಿ ಮೌನ.
ಉಳಿದಂತೆ ಇಡೀ ದಿನ ಅಲ್ಲಿ ವಾಕಿಂಗ್ ಹೋಗುವವರು, ಕಟ್ಟೆಯಲ್ಲಿ ಕುಳಿತುಕೊಳ್ಳುವ ಅಲೆಮಾರಿಗಳಿಗದು ಪ್ರಶಸ್ತ ತಾಣ.
ಹಾಗಾಗಿಯೋ ಏನೊ ಮೊನ್ನೆ ಆ ನಿವ್ರುತ್ತಿನಂಚಿನಲ್ಲಿರುವ ಟೀಚರ್ ಕೂಡಾ ಅಲ್ಲೇ ಗೌಜಿ ಮಾಡಿಕೊಂಡು ಬಿಡಾರ ಮಾಡಿದ್ದು. ಏನಮ್ಮಾ ಇಲ್ಲ್ಯಾಕೆ ಬಂದಿ ಎಂದು ಸ್ಟೇಶನ್ ಮಾಸ್ತರ್ ಕೇಳಿದರೆ ‘ನೀನ್ಯಾರು’ ಎಂದು ಜೋರು ಮಾಡುತ್ತಾ ಕುಳಿತಿದ್ದ ಟೀಚರ್ ಎಲ್ಲರ ಗಮನ ಸೆಳೆದರು.
*********
ಟೀಚರಿಂದು ದುರಂತದ ಕಥೆ. ಗಂಡ ಜತೆಗಿಲ್ಲ. ಮಗ ಓಡಿ ಹೋಗಿದ್ದಾನೆ. ಆ ಚಿಂತೆ ಮನಸ್ಸಿನ ತುಂಬೆಲ್ಲಾ ಹರಡಿ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಹಾಗೇ ಇದ್ದ ಬಾಡಿಗೆ ಮನೆ ಬಿಟ್ಟು ನೆಮ್ಮದಿ ಅರಸಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು. ಹತ್ತಿರವೇ ಶಿಕ್ಷಣ ಇಲಾಖೆಯ ಕಚೇರಿ ಇದ್ದರೂ ಟೀಚರ್ ನೆರವಿಗೆ ಯರೂ ಬರಲಿಲ್ಲ. ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಯಿತು. ಪ್ರಯೋಜನ ಶೂನ್ಯ..
*********
ಹೌದು. ಯಾಕೆ ಬರುತ್ತಾರೆ? ಮಹಿಳೆಯರ ಪರ ಹೋರಾಟ ಮಾಡುವ ಸಂಘಟನೆಗಳು, ಟಿ.ವಿ. ಕ್ಯಾಮೆರಾಗಳು, ಅದೇ ಸಮಯದಲ್ಲಿ ಪಬ್ಬಿಗೆ ಹೋದ ಇನ್ನೂ ಯಾರೆಂದು ಗೊತಿಲ್ಲದ ಶ್ರೀಮಂತ ಗಣ್ಯ ವ್ಯಕ್ತಿಗಳ ಮಕ್ಕಳ ಮಾನ ಹರಾಜಾದ ಘಟನೆಯನ್ನು ಲೋಕಕ್ಕೆಲ್ಲಾ ತಿಳಿಸಲು ಪೈಪೋಟಿ ನಡೆಸುತ್ತಿದ್ದ ಕಾಲ ಅದು. ಪತ್ರಿಕೆಗಳಲ್ಲಿ(ಒಂದು ಬೆಳಗ್ಗಿನ, ಎರಡು ಸಂಜೆಯ) ವರದಿ ಬಂತು. ಅದೇ ಸಮಯಕ್ಕೆ ಪಬ್ಬು, ಬಾರಿಗೆ ಬಂದ ಮಹಿಳಾ ಆಯೋಗದ ಎರಡೂ ಬಣದ ಸದಸ್ಯರಿಗೆ ಕೇವಲ ೨೫ ಕಿ.ಮೀ. ಇರುವ ಬಿ.ಸಿ.ರೋಡಿಗೆ ಬರಲಾಗಲಿಲ್ಲ...
*********
ಹೋಗಲಿ ಬಿಡಿ, ಯಾರು ಬರದಿದ್ದರೇನಾಯಿತಂತೆ ಎಂದು ಯಾವ ಊರು ಉಧ್ಹಾರದ ಸಂಘಟನೆಯಲ್ಲೂ ಗುರುತಿಸದ ಕೆಲವರು ಟೀಚರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಮಾನಸಿಕ ತಪಾಸಣೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ೮, ೯ ಸಾವಿರ ಖರ್ಚನ್ನು ತಾವೇ ಭರಿಸಿದರು..
ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...
*********
ಒಬ್ಬ ಮಹಿಳೆಯನ್ನು ಯಾವುದೇ ಸಂಘ, ಸಂಸ್ಥೆಗಳ ನೆರವಿಲ್ಲದೇ ಮಾನವೀಯತೆಯಿಂದ ಸಹಾಯ ಮಾಡುವವರು ಎಶ್ಟೋ ಮಂದಿ ನಮ್ಮ ಮಂಗಳೂರಲ್ಲಿದ್ದಾರೆ. ಇಂಥವರು ನಿಮ್ಮೂರಲ್ಲೂ ಇರಬಹುದು.
ನಿಮಗಿದು ತಿಳಿದಿರಲೆಂದು ಬರೆದೆ. ಸುಮ್ಮನೇ ಎಲ್ಲಿಂದಲೋ ಬಂದವರು ನಮ್ಮೂರನ್ನು ‘ತಾಲಿಬಾನ್’ ಎಂದಾಗ ಬೇಸರವಾಗುತ್ತದೆ. ಭಾರತದ ಎಲ್ಲಾ ಊರಿನಂತೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇದೆ. ಮತಾಂಧರ ಜೊತೆ ಮಾನವೀಯತೆ ಇದ್ದವರೂ ಇದ್ದಾರೆ..
*********
ಅಂದ ಹಾಗೆ, ಟೀಚರನ್ನು ಆಸ್ಪತ್ರೆಗೆ ಕರೆದೊಯ್ದವರಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್ - ಎಲ್ಲಾ ಧರ್ಮದವರೂ ಇದ್ದರು.. ಯಾರೂ ನಾನಿಂಥವನು ಎಂದು ಹೇಳಿಕೊಳ್ಳಲಿಲ್ಲ..
ದಿನಕ್ಕೆ ಎರಡು ಪ್ರಯಾಣಿಕರ ರೈಲು ಓಡಾಡುವಾಗ ಜನಸೇರುವುದನ್ನು ಬಿಟ್ಟರೆ ಮತ್ತಲ್ಲಿ ಮೌನ.
ಉಳಿದಂತೆ ಇಡೀ ದಿನ ಅಲ್ಲಿ ವಾಕಿಂಗ್ ಹೋಗುವವರು, ಕಟ್ಟೆಯಲ್ಲಿ ಕುಳಿತುಕೊಳ್ಳುವ ಅಲೆಮಾರಿಗಳಿಗದು ಪ್ರಶಸ್ತ ತಾಣ.
ಹಾಗಾಗಿಯೋ ಏನೊ ಮೊನ್ನೆ ಆ ನಿವ್ರುತ್ತಿನಂಚಿನಲ್ಲಿರುವ ಟೀಚರ್ ಕೂಡಾ ಅಲ್ಲೇ ಗೌಜಿ ಮಾಡಿಕೊಂಡು ಬಿಡಾರ ಮಾಡಿದ್ದು. ಏನಮ್ಮಾ ಇಲ್ಲ್ಯಾಕೆ ಬಂದಿ ಎಂದು ಸ್ಟೇಶನ್ ಮಾಸ್ತರ್ ಕೇಳಿದರೆ ‘ನೀನ್ಯಾರು’ ಎಂದು ಜೋರು ಮಾಡುತ್ತಾ ಕುಳಿತಿದ್ದ ಟೀಚರ್ ಎಲ್ಲರ ಗಮನ ಸೆಳೆದರು.
*********
ಟೀಚರಿಂದು ದುರಂತದ ಕಥೆ. ಗಂಡ ಜತೆಗಿಲ್ಲ. ಮಗ ಓಡಿ ಹೋಗಿದ್ದಾನೆ. ಆ ಚಿಂತೆ ಮನಸ್ಸಿನ ತುಂಬೆಲ್ಲಾ ಹರಡಿ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಹಾಗೇ ಇದ್ದ ಬಾಡಿಗೆ ಮನೆ ಬಿಟ್ಟು ನೆಮ್ಮದಿ ಅರಸಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು. ಹತ್ತಿರವೇ ಶಿಕ್ಷಣ ಇಲಾಖೆಯ ಕಚೇರಿ ಇದ್ದರೂ ಟೀಚರ್ ನೆರವಿಗೆ ಯರೂ ಬರಲಿಲ್ಲ. ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಯಿತು. ಪ್ರಯೋಜನ ಶೂನ್ಯ..
*********
ಹೌದು. ಯಾಕೆ ಬರುತ್ತಾರೆ? ಮಹಿಳೆಯರ ಪರ ಹೋರಾಟ ಮಾಡುವ ಸಂಘಟನೆಗಳು, ಟಿ.ವಿ. ಕ್ಯಾಮೆರಾಗಳು, ಅದೇ ಸಮಯದಲ್ಲಿ ಪಬ್ಬಿಗೆ ಹೋದ ಇನ್ನೂ ಯಾರೆಂದು ಗೊತಿಲ್ಲದ ಶ್ರೀಮಂತ ಗಣ್ಯ ವ್ಯಕ್ತಿಗಳ ಮಕ್ಕಳ ಮಾನ ಹರಾಜಾದ ಘಟನೆಯನ್ನು ಲೋಕಕ್ಕೆಲ್ಲಾ ತಿಳಿಸಲು ಪೈಪೋಟಿ ನಡೆಸುತ್ತಿದ್ದ ಕಾಲ ಅದು. ಪತ್ರಿಕೆಗಳಲ್ಲಿ(ಒಂದು ಬೆಳಗ್ಗಿನ, ಎರಡು ಸಂಜೆಯ) ವರದಿ ಬಂತು. ಅದೇ ಸಮಯಕ್ಕೆ ಪಬ್ಬು, ಬಾರಿಗೆ ಬಂದ ಮಹಿಳಾ ಆಯೋಗದ ಎರಡೂ ಬಣದ ಸದಸ್ಯರಿಗೆ ಕೇವಲ ೨೫ ಕಿ.ಮೀ. ಇರುವ ಬಿ.ಸಿ.ರೋಡಿಗೆ ಬರಲಾಗಲಿಲ್ಲ...
*********
ಹೋಗಲಿ ಬಿಡಿ, ಯಾರು ಬರದಿದ್ದರೇನಾಯಿತಂತೆ ಎಂದು ಯಾವ ಊರು ಉಧ್ಹಾರದ ಸಂಘಟನೆಯಲ್ಲೂ ಗುರುತಿಸದ ಕೆಲವರು ಟೀಚರನ್ನು ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಮಾನಸಿಕ ತಪಾಸಣೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ೮, ೯ ಸಾವಿರ ಖರ್ಚನ್ನು ತಾವೇ ಭರಿಸಿದರು..
ಈಗ ಟೀಚರ್ ಗುಣಮುಖರಾಗುತ್ತಿದ್ದಾರೆ...
*********
ಒಬ್ಬ ಮಹಿಳೆಯನ್ನು ಯಾವುದೇ ಸಂಘ, ಸಂಸ್ಥೆಗಳ ನೆರವಿಲ್ಲದೇ ಮಾನವೀಯತೆಯಿಂದ ಸಹಾಯ ಮಾಡುವವರು ಎಶ್ಟೋ ಮಂದಿ ನಮ್ಮ ಮಂಗಳೂರಲ್ಲಿದ್ದಾರೆ. ಇಂಥವರು ನಿಮ್ಮೂರಲ್ಲೂ ಇರಬಹುದು.
ನಿಮಗಿದು ತಿಳಿದಿರಲೆಂದು ಬರೆದೆ. ಸುಮ್ಮನೇ ಎಲ್ಲಿಂದಲೋ ಬಂದವರು ನಮ್ಮೂರನ್ನು ‘ತಾಲಿಬಾನ್’ ಎಂದಾಗ ಬೇಸರವಾಗುತ್ತದೆ. ಭಾರತದ ಎಲ್ಲಾ ಊರಿನಂತೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇದೆ. ಮತಾಂಧರ ಜೊತೆ ಮಾನವೀಯತೆ ಇದ್ದವರೂ ಇದ್ದಾರೆ..
*********
ಅಂದ ಹಾಗೆ, ಟೀಚರನ್ನು ಆಸ್ಪತ್ರೆಗೆ ಕರೆದೊಯ್ದವರಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್ - ಎಲ್ಲಾ ಧರ್ಮದವರೂ ಇದ್ದರು.. ಯಾರೂ ನಾನಿಂಥವನು ಎಂದು ಹೇಳಿಕೊಳ್ಳಲಿಲ್ಲ..
Friday, February 13, 2009
ಪ್ರೀತಿಯ ಸೆಲೆ
ಹಸಿವ ಕಂಗಳು,ಒಣಗಿದ ತುಟಿಗಳ ಏರು ಜವ್ವನೆಗೆ
ಬಿಗಿದಪ್ಪಿ ಮುತ್ತಿನ ಮಳೆ ಎರೆಯಲು ಎಲ್ಲಿದೆ ಪುರುಸೊತ್ತು?
ಹಳ್ಳಿಯ ಹವೆಯೂ ಈಗ ಮಲಿನಗೊಂಡಿದೆ ಹುಟ್ಟಿದ್ದಕ್ಕೆ,
ಅಪ್ಪುವುದಕ್ಕೆ, ಬಟ್ಟೆ ಹಾಕುವುದಕ್ಕೆ, ಕಳಚುವುದಕ್ಕೊಂದು
ದಿನ ಎಂಬ ಆಚರಣೆಯೇ ಸೋಜಿಗ ತಂದಿದೆ..
ತೊದಲು ನುಡಿಯನಾಡುವ ಹಸುಳೆಗೇನು ಗೊತ್ತು?
ಇನ್ನು ಮುಂದೆ ಬಾಳ ಪಯಣ ಯಾರ ಮನೆಯ ತೊತ್ತು?
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ
ಸೆಂಟ್,ಪೌಡರ್ ಹಾಕಿ ಕೆಂಭೂತದಂತೆ ಪಾರ್ಕುಗಳಲ್ಲಿ
ಅಂಡಲೆದು ಕೆಟ್ಟ ಜಾಗತೀಕರಣದ ಲಿಪ್ ಸ್ಟಿಕ್ ನ ಚುಂಬನಕ್ಕೆ
ದಿನ, ಮುಹೂರ್ತ ಪ್ರತ್ಯೇಕ ಯಾಕೆ?
ಪ್ರೀತಿಯ ಸೆಲೆ ಕಾಣಲು ಕಳ್ಳತನವೇಕೆ?
ಬಿಗಿದಪ್ಪಿ ಮುತ್ತಿನ ಮಳೆ ಎರೆಯಲು ಎಲ್ಲಿದೆ ಪುರುಸೊತ್ತು?
ಹಳ್ಳಿಯ ಹವೆಯೂ ಈಗ ಮಲಿನಗೊಂಡಿದೆ ಹುಟ್ಟಿದ್ದಕ್ಕೆ,
ಅಪ್ಪುವುದಕ್ಕೆ, ಬಟ್ಟೆ ಹಾಕುವುದಕ್ಕೆ, ಕಳಚುವುದಕ್ಕೊಂದು
ದಿನ ಎಂಬ ಆಚರಣೆಯೇ ಸೋಜಿಗ ತಂದಿದೆ..
ತೊದಲು ನುಡಿಯನಾಡುವ ಹಸುಳೆಗೇನು ಗೊತ್ತು?
ಇನ್ನು ಮುಂದೆ ಬಾಳ ಪಯಣ ಯಾರ ಮನೆಯ ತೊತ್ತು?
ಸಧ್ಯಕ್ಕೆ ಅಮ್ಮನ ಬೆಚ್ಹನೆಯ ಮುತ್ತೇ ಸಾಕೆನುತಿದೆ
ಸೆಂಟ್,ಪೌಡರ್ ಹಾಕಿ ಕೆಂಭೂತದಂತೆ ಪಾರ್ಕುಗಳಲ್ಲಿ
ಅಂಡಲೆದು ಕೆಟ್ಟ ಜಾಗತೀಕರಣದ ಲಿಪ್ ಸ್ಟಿಕ್ ನ ಚುಂಬನಕ್ಕೆ
ದಿನ, ಮುಹೂರ್ತ ಪ್ರತ್ಯೇಕ ಯಾಕೆ?
ಪ್ರೀತಿಯ ಸೆಲೆ ಕಾಣಲು ಕಳ್ಳತನವೇಕೆ?
Sunday, February 1, 2009
ಪಾಪಿ ದುನಿಯಾ..!
ಜನವರಿ ೨೫, ಭಾನುವಾರ.
ರಾತ್ರಿ ೨.೪೫ರ ಸಮಯ.
ಸ್ಥಳ: ಪಡೀಲ್ ಸಮೀಪದ ರೈಲ್ವೇ ಮೇಲ್ಸೇತುವೆಯ ಅಡಿ ರಾ.ಹೆ.೪೮.
ಅಲ್ಲೇ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಹೆದ್ದಾರಿ ಕಾಮಗರಿ ನಡೆಸುತ್ತಿದ್ದ ಹಿಟಾಚಿ ಯಂತ್ರದ ಕೈ ಅಪ್ಪಳಿಸಿದ್ದು.
ಕಾರಿನ ಮುಂಭಾಗದ ಗಾಜು ಹುಡಿಯಾಗಿತ್ತು. ಮುಂದೆ ಕುಳಿತಿದ್ದ ಚಾಲಕ, ನಾನು ಬದುಕಿದ್ದೇ ಒಂದು ಪವಾಡ...
ಇರಲಿ ಇದು ಮಾಮೂಲಿ ಸಂಗತಿ. ಇಂಥದ್ದೆಷ್ಟೋ ನಡೆಯುತ್ತವೆ.
**********
ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ಅತಿಭಾರದ ಅದಿರುಲಾರಿ ಸಂಚಾರ, ನೋಡಿಯೂ ನೋಡದಂತಿರುವ ಆಡಳಿತ, ಈ ಕುರಿತು ಸ್ಥಳೀಯ ಪತ್ರಿಕೆಗಳು ಬರೆದರೂ ಪ್ರಯೋಜನ ಆಗಿರಲಿಲ್ಲ..ಹೀಗಾಗಿ ನ್ಯಾಷನಲ್ ಚಾನಲ್ ನೋಡಿದೊಡನೇ ಛೇ..ನಮ್ಮ ಹೆದ್ದಾರಿಯ ಬಗ್ಗೆ, ಹಗಲು ರೈಲು ಓಡಾಟದ ಬಗ್ಗೆ ಬಿತ್ತರಿಸಲಿ ಎಂದು ಹಾರೈಸುತ್ತಿದ್ದೆ. ಮೊನ್ನೆ ಅಪಘಾತ ಆದಾಗಲೂ ಹಾಗೇ ಅಂದುಕೊಂಡೆ.
**************
ಮರುದಿನ ಸೋಮವಾರ ಮತ್ತೆ ಕೆಟ್ಟ ರಸ್ತೆಯಲ್ಲಿ ಮಧ್ಯಾಹ್ನ ಮಂಗಳೂರಿನತ್ತ ಬರುತ್ತಿದ್ದೆ. ಉದ್ದುದ್ದದ ಟ್ರಾಫಿಕ್ ಜಾಂ.. ಪ್ರಯಾಣಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದರು...ಹಾಗೂ ಹೀಗೂ ಪಂಪ್ ವೆಲ್ ಬಳಿ ಬಂದಾಗ ಬುರ್ರನೆ ಟಿ.ವಿ(ನ್ಯಾಶನಲ್). ವ್ಯಾನೊಂದು ಪಾಸಾಯಿತು. ಅಬ್ಬ.. ಇನ್ನು ಮಂಗಳೂರಿಗರ ಸಮಸ್ಯೆ ಪರಿಹಾರ ಸ್ವಲ್ಪ ಮಟ್ಟಿಗಾದರೂ ದೆಹಲಿಮಟ್ಟಕ್ಕೆ ಹೋಗಬಹುದು ಅಂದುಕೊಂಡೆ.
ಆಗ ಸಮಯ ೧೨.೩೦..ಮಟ ಮಟ ಮಧ್ಯಾಹ್ನ..ಜನವರಿ ೨೬. ಮಂಗಳೂರು ಎಂದಿನಂತೇ ಇತ್ತು. ಮಹಿಳೆಯರು, ಮಕ್ಕಳು ನಿರ್ಭಯವಾಗಿ ನಗುನಗುತ್ತಾ ಪೇಟೆಸಂಚಾರ ಮಾಡುತ್ತಿದ್ದರು. ...
ನಮ್ಮ ಕೆ.ಎಸ್.ರಾವ್ ರಸ್ತೆಯಲ್ಲಿ ಎಂದಿಗಿಂತ ಹೆಚ್ಹಿನ ಜನ..ರಜೆ ಅಲ್ವಾ?
********
ಟಿ.ವಿ.ಯಲ್ಲಿ ನ್ಯಾಶನಲ್ ಚಾನೆಲ್ ನಲ್ಲಿ ಭಾರೀ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇಡೀ ಮಂಗಳೂರು ಭಯಭೀತವಾಗಿದೆ..ಹಾಗೆ, ಹೀಗೆ ಎಂದು..ಆ ಹೊತ್ತಿನ ಮಟ್ಟಿಗೆ ಅದು ಸುಳ್ಳೂ ಆಗಿತ್ತು...ಕೂಡಲೇ ಹೇಳಿದೆ ಏನು ಮಾರಾಯ್ರೆ, ಜ್ವಲಂತ ಸಮಸ್ಯೆಗಳು ಹಲವಾರಿವೆ. ಅವಕ್ಕೆಲ್ಲ ಈ ಟಿ.ವಿ. ಚಾನೆಲ್ ಗಳು ಮಂಗಳೂರಿಗೆ ಬರುವುದಿಲ್ಲ. ಈ ಸುದ್ದಿಗಿಂತ ಇನ್ನೂ ದೊಡ್ದ ಸುದ್ದಿ ಬೇಕಾದಸ್ಟಿದೆ ಮಾರಾಯ್ರೇ?
ತಕ್ಷಣ ಒಬ್ಬ ಉದ್ವೇಗದಿಂದ ಹೇಳಿದ ಹಾಗಾದರೆ ಹೆಣ್ಣು ಮಕ್ಕಳಿಗೆ ಹೊಡೆದದ್ದು ನಿಮಗೇನೂ ಅಲ್ವ?
************
ಹೆಣ್ಣು ಮಕ್ಕಳಿಗೆ ಹೊಡೆದದ್ದು ತಪ್ಪು. ಒಪ್ಪಿಕೊಳ್ಳೋಣ. ಅದು ಶನಿವಾರ ೨೪, ಜನವರಿಯಂದು ನಡೆದ ಘಟನೆ. ಅದರ ಬಗ್ಗೆ ಬೇಕಾದ ಚರ್ಚೆ ನಡೆದಿವೆ. ಆದರೆ ಪ್ರಾಣವನ್ನೇ ತೆಗೆಯುವಂಥ ಹೆದ್ದಾರಿ ಅವ್ಯವಸ್ಥೆಯೂ ಸಮಸ್ಯೆಯೇ ಅಲ್ಲವೇ..
********
ಈ ಗೊಂದಲ ನನ್ನ ತಲೆ ಹೊಕ್ಕಿತು. ಬಿಡಿ..ನಾನೊಬ್ಬ ಸಾಮಾನ್ಯ ಮನುಷ್ಯ. ಸತ್ತರೆಷ್ಟು, ಬಿಟ್ಟರೆಷ್ಟು? ಪಾಪ ಪಬ್ಬಿಗೆ ಹೋಗಿ ಕುಣಿದು ಕುಪ್ಪಳಿಸುವವರಿಗಾಗಿ, ಆಮಲು ಪದಾರ್ಥ ಸೇವಿಸಿ ರಾತ್ರಿ ಅಲ್ಲಲ್ಲಿ ಬಿದ್ದುಕೊಳ್ಳುವವರಿಗಾಗಿ ಅಲ್ಲವೇ ಸಪೋರ್ಟ್?
ಏನಂತೀರಿ?
ರಾತ್ರಿ ೨.೪೫ರ ಸಮಯ.
ಸ್ಥಳ: ಪಡೀಲ್ ಸಮೀಪದ ರೈಲ್ವೇ ಮೇಲ್ಸೇತುವೆಯ ಅಡಿ ರಾ.ಹೆ.೪೮.
ಅಲ್ಲೇ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಹೆದ್ದಾರಿ ಕಾಮಗರಿ ನಡೆಸುತ್ತಿದ್ದ ಹಿಟಾಚಿ ಯಂತ್ರದ ಕೈ ಅಪ್ಪಳಿಸಿದ್ದು.
ಕಾರಿನ ಮುಂಭಾಗದ ಗಾಜು ಹುಡಿಯಾಗಿತ್ತು. ಮುಂದೆ ಕುಳಿತಿದ್ದ ಚಾಲಕ, ನಾನು ಬದುಕಿದ್ದೇ ಒಂದು ಪವಾಡ...
ಇರಲಿ ಇದು ಮಾಮೂಲಿ ಸಂಗತಿ. ಇಂಥದ್ದೆಷ್ಟೋ ನಡೆಯುತ್ತವೆ.
**********
ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಕಾಮಗಾರಿ, ಅತಿಭಾರದ ಅದಿರುಲಾರಿ ಸಂಚಾರ, ನೋಡಿಯೂ ನೋಡದಂತಿರುವ ಆಡಳಿತ, ಈ ಕುರಿತು ಸ್ಥಳೀಯ ಪತ್ರಿಕೆಗಳು ಬರೆದರೂ ಪ್ರಯೋಜನ ಆಗಿರಲಿಲ್ಲ..ಹೀಗಾಗಿ ನ್ಯಾಷನಲ್ ಚಾನಲ್ ನೋಡಿದೊಡನೇ ಛೇ..ನಮ್ಮ ಹೆದ್ದಾರಿಯ ಬಗ್ಗೆ, ಹಗಲು ರೈಲು ಓಡಾಟದ ಬಗ್ಗೆ ಬಿತ್ತರಿಸಲಿ ಎಂದು ಹಾರೈಸುತ್ತಿದ್ದೆ. ಮೊನ್ನೆ ಅಪಘಾತ ಆದಾಗಲೂ ಹಾಗೇ ಅಂದುಕೊಂಡೆ.
**************
ಮರುದಿನ ಸೋಮವಾರ ಮತ್ತೆ ಕೆಟ್ಟ ರಸ್ತೆಯಲ್ಲಿ ಮಧ್ಯಾಹ್ನ ಮಂಗಳೂರಿನತ್ತ ಬರುತ್ತಿದ್ದೆ. ಉದ್ದುದ್ದದ ಟ್ರಾಫಿಕ್ ಜಾಂ.. ಪ್ರಯಾಣಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದರು...ಹಾಗೂ ಹೀಗೂ ಪಂಪ್ ವೆಲ್ ಬಳಿ ಬಂದಾಗ ಬುರ್ರನೆ ಟಿ.ವಿ(ನ್ಯಾಶನಲ್). ವ್ಯಾನೊಂದು ಪಾಸಾಯಿತು. ಅಬ್ಬ.. ಇನ್ನು ಮಂಗಳೂರಿಗರ ಸಮಸ್ಯೆ ಪರಿಹಾರ ಸ್ವಲ್ಪ ಮಟ್ಟಿಗಾದರೂ ದೆಹಲಿಮಟ್ಟಕ್ಕೆ ಹೋಗಬಹುದು ಅಂದುಕೊಂಡೆ.
ಆಗ ಸಮಯ ೧೨.೩೦..ಮಟ ಮಟ ಮಧ್ಯಾಹ್ನ..ಜನವರಿ ೨೬. ಮಂಗಳೂರು ಎಂದಿನಂತೇ ಇತ್ತು. ಮಹಿಳೆಯರು, ಮಕ್ಕಳು ನಿರ್ಭಯವಾಗಿ ನಗುನಗುತ್ತಾ ಪೇಟೆಸಂಚಾರ ಮಾಡುತ್ತಿದ್ದರು. ...
ನಮ್ಮ ಕೆ.ಎಸ್.ರಾವ್ ರಸ್ತೆಯಲ್ಲಿ ಎಂದಿಗಿಂತ ಹೆಚ್ಹಿನ ಜನ..ರಜೆ ಅಲ್ವಾ?
********
ಟಿ.ವಿ.ಯಲ್ಲಿ ನ್ಯಾಶನಲ್ ಚಾನೆಲ್ ನಲ್ಲಿ ಭಾರೀ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇಡೀ ಮಂಗಳೂರು ಭಯಭೀತವಾಗಿದೆ..ಹಾಗೆ, ಹೀಗೆ ಎಂದು..ಆ ಹೊತ್ತಿನ ಮಟ್ಟಿಗೆ ಅದು ಸುಳ್ಳೂ ಆಗಿತ್ತು...ಕೂಡಲೇ ಹೇಳಿದೆ ಏನು ಮಾರಾಯ್ರೆ, ಜ್ವಲಂತ ಸಮಸ್ಯೆಗಳು ಹಲವಾರಿವೆ. ಅವಕ್ಕೆಲ್ಲ ಈ ಟಿ.ವಿ. ಚಾನೆಲ್ ಗಳು ಮಂಗಳೂರಿಗೆ ಬರುವುದಿಲ್ಲ. ಈ ಸುದ್ದಿಗಿಂತ ಇನ್ನೂ ದೊಡ್ದ ಸುದ್ದಿ ಬೇಕಾದಸ್ಟಿದೆ ಮಾರಾಯ್ರೇ?
ತಕ್ಷಣ ಒಬ್ಬ ಉದ್ವೇಗದಿಂದ ಹೇಳಿದ ಹಾಗಾದರೆ ಹೆಣ್ಣು ಮಕ್ಕಳಿಗೆ ಹೊಡೆದದ್ದು ನಿಮಗೇನೂ ಅಲ್ವ?
************
ಹೆಣ್ಣು ಮಕ್ಕಳಿಗೆ ಹೊಡೆದದ್ದು ತಪ್ಪು. ಒಪ್ಪಿಕೊಳ್ಳೋಣ. ಅದು ಶನಿವಾರ ೨೪, ಜನವರಿಯಂದು ನಡೆದ ಘಟನೆ. ಅದರ ಬಗ್ಗೆ ಬೇಕಾದ ಚರ್ಚೆ ನಡೆದಿವೆ. ಆದರೆ ಪ್ರಾಣವನ್ನೇ ತೆಗೆಯುವಂಥ ಹೆದ್ದಾರಿ ಅವ್ಯವಸ್ಥೆಯೂ ಸಮಸ್ಯೆಯೇ ಅಲ್ಲವೇ..
********
ಈ ಗೊಂದಲ ನನ್ನ ತಲೆ ಹೊಕ್ಕಿತು. ಬಿಡಿ..ನಾನೊಬ್ಬ ಸಾಮಾನ್ಯ ಮನುಷ್ಯ. ಸತ್ತರೆಷ್ಟು, ಬಿಟ್ಟರೆಷ್ಟು? ಪಾಪ ಪಬ್ಬಿಗೆ ಹೋಗಿ ಕುಣಿದು ಕುಪ್ಪಳಿಸುವವರಿಗಾಗಿ, ಆಮಲು ಪದಾರ್ಥ ಸೇವಿಸಿ ರಾತ್ರಿ ಅಲ್ಲಲ್ಲಿ ಬಿದ್ದುಕೊಳ್ಳುವವರಿಗಾಗಿ ಅಲ್ಲವೇ ಸಪೋರ್ಟ್?
ಏನಂತೀರಿ?
Thursday, January 15, 2009
ಕುಡ್ಲವೆಂಬ ಬಲೂನು!
ಹಾಗೇ ಸುಮ್ಮನೆ ಹಿಂದಿರುಗಿ ನೋಡಿ!
ಕುಡ್ಲ ಹೇಗೆ ಕಾಣುತ್ತದೆ?
ತುಳು ಭಾಷೆಯಲ್ಲಿ ಕುಡ್ಲ, ಮಲಯಾಳಿಗಳಿಗೆ ಮಂಗಳಾಪುರ, ನಮಗೆಲ್ಲಾ ಮಂಗಳೂರು.
ಕರಾವಳಿಯ ಈ ಬಂದರು ಪಟ್ಟಣ ದಿಡೀರನೆ ಧೃಡಕಾಯವಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಊರು ಬಿಡದೆ ಇಲ್ಲಿಯೇ ವಾಸಿಸುವ ನನ್ನಂಥ ಸಾಮಾನ್ಯರಿಗೂ ಅರ್ಥವಾಗದಷ್ಟು ಕುಡ್ಲ ಮಾರ್ಪಾಡಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಎಂಟನೇ ಕ್ಲಾಸಿಗೆ ಬೋಂದೇಲಿನಿಂದ ೧೯ ನಂಬ್ರದ ಬಸ್ಸಿನಲ್ಲಿ ಲಾಲ್ ಬಾಗ್ ಹೋಗುವಾಗ ಇದ್ದ ಸ್ಥಿತಿ ಈಗಿಲ್ಲ ಅನ್ನುವುದಾದರೆ ಅದು ಸಹಜ. ಆದರೆ ಮಿತಿಮೀರಿದ ವೇಗ ಮಾತ್ರ ಅಪಾಯಕ್ಕೆ ಆಹ್ವಾನ!.
ನಮ್ಮ ಕುಡ್ಲದಲ್ಲಿರುವ ಕೆಲವು ಶಾಪಿಂಗ್ ಕಾಂಪ್ಲೆಕ್ಸ್ ಗಳ ಒಳಹೊಕ್ಕು ನೋಡಿ. ಚಕ್ರವ್ಯೂಹದಂತಿರುವ ಕಟ್ಟಡಗಳೇ ಒಂದು ನಿಗೂಡ.ಅಲ್ಲೆಲ್ಲಾ ಎಂಥ ವಹಿವಾಟು ನಡೆಯುತ್ತಿದೆ? ಲಾಭ? ಕೇಳಿದರೆ ಲಾಸ್ ಮಾರ್ರೆ ಅನ್ನುತ್ತಾರೆ. ಹಾಗಾದರೆ ಒಂದೊಂದು ಅಂಗಡಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನಿಟ್ಟು ಮಾಲಕ ಮಾಡುವ ಕೆಲಸ ಏನು?
ಮುಂಬಯಿಯಲ್ಲಿ ಹೊಸ ಫ್ಯಾಷನ್ ಬಂದ ಕೂಡಲೇ ಮಂಗಳೂರಿನಲ್ಲಿ ಅದು ಕಾಣಿಸುತ್ತದೆ. ಅಲ್ಲಿ ಹೊಸ ಡಾನ್ ಹುಟ್ಟಿದರೆ ಇಲ್ಲಿ ಹೊಸ ಪೆಟ್ಟಿಸ್ಟ್(ಪೆಟ್ಟು ಮಾಡಲು ಗೊತ್ತಿದ್ದವ) ಹುಟ್ತುತ್ತಾನೆ. ಹೀಗೆ ನಮ್ಮ ಮಂಗಳೂರು ಮತ್ತು ಮುಂಬಯಿಯ ನಂಟು ಅಮೋಘ.
ಸುನಿಲ್ ಶೆಟ್ಟಿ ಮಂಗಳೂರಲ್ಲೇ ಎರಡೆರಡು ದೊಡ್ಡ ಅಂಗಡಿ ತೆರೆಯುವ ಸಾಹಸ ಮಾಡಿದ್ದಾನೆ. ದುಬಾಇ ಸಹಿತ ದೊಡ್ಡ ದೊಡ್ಡ ಕುಳಗಳು ಇಲ್ಲಿ ಭಾರೀ ಕಟ್ಟಡ ಕಟ್ಟಿಸುತ್ತಿದ್ದಾರೆ.
ಅದೆಲ್ಲಾ ಸರಿ, ಇದರಿಂದ ಯಾರಿಗೆ ಲಾಭ?
ಫುಟ್ ಪಾತ್ ಇಲ್ಲದ ರಸ್ತೆಗಳು, ಕ್ಲೀನ್ ಇಲ್ಲದ ಬಸ್ ನಿಲ್ದಾಣ, ಪ್ರಯೋಜನವಿಲ್ಲದ ನೇತಾರರ ನಡುವೆಯೂ ಕುಡ್ಲದ ಲ್ಯಾಂಡ್ ವ್ಯಾಲ್ಯೂ ಮಿತಿಮೀರಿ ಹೆಚ್ಹಿದೆ. ಚರ್ಚೆ ಮಾಡಲು ಹೋದಗೆ ‘ಪೆಟ್ಟಿಗೆ’ ಬರುತ್ತಾರೆ. ಹೀಗಾಗಿ ಬೆಂಗಳೂರಿಗೇನೂ ಕಮ್ಮಿ ಇಲ್ಲ.
ಇವೆಲ್ಲದರ ನಡುವೆ ಅದೇ ಕದ್ರಿ ಪಾರ್ಕ್, ಅದೇ ಸುಲ್ತಾನ್ ಬತ್ತೇರಿ, ಅದೇ ಪಣಂಬೂರು ಬೀಚ್ ಕೈಬೀಸಿ ಕರೆಯುತ್ತಿದೆ.
--ಇವಿಷ್ಟು ಸದ್ಯಕ್ಕೆ ಸಾಕು ಬರೆಯುವುದು ಬೇಕಾದಷ್ಟು ಇದೆ. ಅದಕ್ಕೂ ಮೊದಲು ನೀವೇನು ಕಂಡಿದ್ದೀರಿ ಹೇಳಿ.
ಕುಡ್ಲ ಹೇಗೆ ಕಾಣುತ್ತದೆ?
ತುಳು ಭಾಷೆಯಲ್ಲಿ ಕುಡ್ಲ, ಮಲಯಾಳಿಗಳಿಗೆ ಮಂಗಳಾಪುರ, ನಮಗೆಲ್ಲಾ ಮಂಗಳೂರು.
ಕರಾವಳಿಯ ಈ ಬಂದರು ಪಟ್ಟಣ ದಿಡೀರನೆ ಧೃಡಕಾಯವಾಗುತ್ತಿದೆ.
ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಊರು ಬಿಡದೆ ಇಲ್ಲಿಯೇ ವಾಸಿಸುವ ನನ್ನಂಥ ಸಾಮಾನ್ಯರಿಗೂ ಅರ್ಥವಾಗದಷ್ಟು ಕುಡ್ಲ ಮಾರ್ಪಾಡಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಎಂಟನೇ ಕ್ಲಾಸಿಗೆ ಬೋಂದೇಲಿನಿಂದ ೧೯ ನಂಬ್ರದ ಬಸ್ಸಿನಲ್ಲಿ ಲಾಲ್ ಬಾಗ್ ಹೋಗುವಾಗ ಇದ್ದ ಸ್ಥಿತಿ ಈಗಿಲ್ಲ ಅನ್ನುವುದಾದರೆ ಅದು ಸಹಜ. ಆದರೆ ಮಿತಿಮೀರಿದ ವೇಗ ಮಾತ್ರ ಅಪಾಯಕ್ಕೆ ಆಹ್ವಾನ!.
ನಮ್ಮ ಕುಡ್ಲದಲ್ಲಿರುವ ಕೆಲವು ಶಾಪಿಂಗ್ ಕಾಂಪ್ಲೆಕ್ಸ್ ಗಳ ಒಳಹೊಕ್ಕು ನೋಡಿ. ಚಕ್ರವ್ಯೂಹದಂತಿರುವ ಕಟ್ಟಡಗಳೇ ಒಂದು ನಿಗೂಡ.ಅಲ್ಲೆಲ್ಲಾ ಎಂಥ ವಹಿವಾಟು ನಡೆಯುತ್ತಿದೆ? ಲಾಭ? ಕೇಳಿದರೆ ಲಾಸ್ ಮಾರ್ರೆ ಅನ್ನುತ್ತಾರೆ. ಹಾಗಾದರೆ ಒಂದೊಂದು ಅಂಗಡಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನಿಟ್ಟು ಮಾಲಕ ಮಾಡುವ ಕೆಲಸ ಏನು?
ಮುಂಬಯಿಯಲ್ಲಿ ಹೊಸ ಫ್ಯಾಷನ್ ಬಂದ ಕೂಡಲೇ ಮಂಗಳೂರಿನಲ್ಲಿ ಅದು ಕಾಣಿಸುತ್ತದೆ. ಅಲ್ಲಿ ಹೊಸ ಡಾನ್ ಹುಟ್ಟಿದರೆ ಇಲ್ಲಿ ಹೊಸ ಪೆಟ್ಟಿಸ್ಟ್(ಪೆಟ್ಟು ಮಾಡಲು ಗೊತ್ತಿದ್ದವ) ಹುಟ್ತುತ್ತಾನೆ. ಹೀಗೆ ನಮ್ಮ ಮಂಗಳೂರು ಮತ್ತು ಮುಂಬಯಿಯ ನಂಟು ಅಮೋಘ.
ಸುನಿಲ್ ಶೆಟ್ಟಿ ಮಂಗಳೂರಲ್ಲೇ ಎರಡೆರಡು ದೊಡ್ಡ ಅಂಗಡಿ ತೆರೆಯುವ ಸಾಹಸ ಮಾಡಿದ್ದಾನೆ. ದುಬಾಇ ಸಹಿತ ದೊಡ್ಡ ದೊಡ್ಡ ಕುಳಗಳು ಇಲ್ಲಿ ಭಾರೀ ಕಟ್ಟಡ ಕಟ್ಟಿಸುತ್ತಿದ್ದಾರೆ.
ಅದೆಲ್ಲಾ ಸರಿ, ಇದರಿಂದ ಯಾರಿಗೆ ಲಾಭ?
ಫುಟ್ ಪಾತ್ ಇಲ್ಲದ ರಸ್ತೆಗಳು, ಕ್ಲೀನ್ ಇಲ್ಲದ ಬಸ್ ನಿಲ್ದಾಣ, ಪ್ರಯೋಜನವಿಲ್ಲದ ನೇತಾರರ ನಡುವೆಯೂ ಕುಡ್ಲದ ಲ್ಯಾಂಡ್ ವ್ಯಾಲ್ಯೂ ಮಿತಿಮೀರಿ ಹೆಚ್ಹಿದೆ. ಚರ್ಚೆ ಮಾಡಲು ಹೋದಗೆ ‘ಪೆಟ್ಟಿಗೆ’ ಬರುತ್ತಾರೆ. ಹೀಗಾಗಿ ಬೆಂಗಳೂರಿಗೇನೂ ಕಮ್ಮಿ ಇಲ್ಲ.
ಇವೆಲ್ಲದರ ನಡುವೆ ಅದೇ ಕದ್ರಿ ಪಾರ್ಕ್, ಅದೇ ಸುಲ್ತಾನ್ ಬತ್ತೇರಿ, ಅದೇ ಪಣಂಬೂರು ಬೀಚ್ ಕೈಬೀಸಿ ಕರೆಯುತ್ತಿದೆ.
--ಇವಿಷ್ಟು ಸದ್ಯಕ್ಕೆ ಸಾಕು ಬರೆಯುವುದು ಬೇಕಾದಷ್ಟು ಇದೆ. ಅದಕ್ಕೂ ಮೊದಲು ನೀವೇನು ಕಂಡಿದ್ದೀರಿ ಹೇಳಿ.
Friday, January 2, 2009
ಬಲ್ಲಿರೇನಯ್ಯ!

ಸುಮಾರು ೨೫ ವರ್ಷಗಳೇ ಕಳೆದು ಹೋದವು!
ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯವದು. ನಮ್ಮೂರು ಕರೋಪಾಡಿ ಗ್ರಾಮ. ಅದಕ್ಕೆ ತಾಗಿಕೊಂಡಿರುವುದು ಕೇರಳ. ಆದರೆ ಅಲ್ಲಿ ಮಲಯಾಳಿಗಳು ಕಡಮೆ. ಕರೋಪಾಡಿಗೆ ಒಳಪಡುವ ಮಿತ್ತನಡ್ಕ, ಪದ್ಯಾಣ, ಮಾಂಬಾಡಿ, ಮುಗುಳಿ ಪ್ರದೇಶಗಳನ್ನು ದಾಟಿ ಬಾಯಾರು, ತಲೆಂಗಳ ಸಂಪರ್ಕಿಸಲು ಗುಡ್ಡೆಯ ದಾರಿ! ಇನ್ನೊಂದು ಗುಡ್ಡೆ ದಾಟಿದರೆ ಅಳಿಕೆ, ಅಡ್ಯನಡ್ಕ...ಹೀಗೆ ಊರೂರುಗಳನ್ನು ಬೆಸೆಯಲು ಬೆಟ್ಟ ಗುಡ್ಡಗಳು. ಜೊತೆಗೆ ಯಕ್ಷಗಾನ.
ನಮ್ಮೂರೇ ಹಾಗಿತ್ತು. ಸಂಜೆಯಾದರೆ ರೇಡಿಯೋ, ವಿಟ್ಲದಿಂದ ಯಾರಾದರೂ ತರುತಿದ್ದ ಪೇಪರ್. ಅದರಲ್ಲಿ
ಎಲ್ಲೆಲ್ಲಿ ಯಾವ್ಯಾವ ಮೇಳಗಳ ಆಟ ಇದೆ? ಎಂದು ನೋಡುವುದು. ಸಾಧ್ಯವಾದರೆ ಅಲ್ಲಿಗೆ ಹೋಗುವಲ್ಲಿವರೆಗೆ(ದೂರದಲ್ಲಿದ್ದರೂ ಸರಿ) ಊರ ಮಂದಿಯ ಅಭಿಮಾನ!. ರಜೆ ಕಳೆಯಲು ಊರಿಗೆ ಬಂದ ನಾನೂ ಅಷ್ಟೇ. ಮಿತ್ತನಡ್ಕದಲ್ಲಿ ಬಯಲಾಟ ಇದೆಯೆಂದಾದರೆ ಆಟ ಪ್ರಾರಂಭವಾಗುವ ಮುನ್ನ ಮನೆಯಲ್ಲೇ ಇಪ್ಪತ್ತು, ಮೂವತ್ತು ಸುತ್ತು ಲಾಗ ಹಾಕುತ್ತಾ ಆಟದ ಮೂಡ್ ಗೆ ಬರುವುದು. ಇರುಳಿಡೀ ಚುರುಮುರಿ, ಐಸ್ ಕ್ಯಾಂಡಿ ತಿನ್ನುತ್ತಾ ಆಟದ ಗೌಜಿ ನೋಡುವುದು.!
*************
ಅಂದ ಹಾಗೆ ನನ್ನ ಹಿರಿಯರ ಕುರಿತು ಒಂದಿಷ್ಟು.
ನನ್ನ ಹಿರಿಯರ ಮನೆ ಮಾಂಬಾಡಿಯೆಂದರೆ ತೆಂಕುತಿಟ್ಟಿನ ಯಕ್ಷಗಾನದ ಗುರುಕುಲ ಇದ್ದ ಹಾಗೆ. ನನ್ನಜ್ಜ (ಅಂದರೆ ತಂದೆಯ ತಂದೆ)ಮಾಂಬಾಡಿ ನಾರಾಯಣ ಭಾಗವತ(೧೯೦೦-೧೯೯೦) ಸುಮಾರು ೧೯೬೦ರವರೆಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದವರು. ೭೦ರ ದಶಕದಲ್ಲೇ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಬಂದಿತ್ತು.
ಆದರೇನು? ಕೇವಲ ಮುಕ್ಕಾಲು ಎಕ್ರೆ ಭೂಮಿ, ಒಂದು ಮನೆ, ಆಕಳು.
ಇವಿಷ್ಟು ಜೊತೆಗೆ ಮನೆಗೆ ಭಾಗವತಿಕೆ, ಚೆಂಡೆ, ಮದ್ದಳೆ ಕಲಿಯಲು ಬರುತ್ತಿದ್ದವರು. ರಿಸರ್ಚ್ ಮಾಡಲು ಬರುವ ವಿದ್ಯಾರ್ಥಿಗಳು. ಮತ್ತು ಅಪಾರ ಅಭಿಮಾನಿಗಳು.
ಇವು ಅಜ್ಜನ ಆಸ್ತಿ.
ಮನೆಗೆ ಬಂದವರನ್ನು ಯಾವ ಜಾತಿಯೆಂದು ಯಾರೂ ಕೇಳಿದವರಲ್ಲ. ಶ್ರೀಮಂತ, ಬಡವ ತಾರತಮ್ಯ ಮೊದಲೇ ಇಲ್ಲ. ಕೇವಲ ಫಲಾಪೇಕ್ಷೆ ಇಲ್ಲದೆ ವಿದ್ಯೆ ಕಲಿಸುವುದು ಅಜ್ಜನ ನೀತಿ.
ಕಡತೋಕ, ಪುತ್ತಿಗೆ, ಪದ್ಯಾಣ ಭಾಗವತರು ಅಜ್ಜನ ಬಳಿ ತಾಳ ಹಾಕಲು ಕಲಿತವರು. ಮಂಗಳೂರಿನಲ್ಲಿದ್ದ ನಾನು ರಜೆಯಲ್ಲಿ ಊರಿಗೆ ಹೋದಾಗಲೆಲ್ಲಾ ನನಗೆ ಕಾಣಸಿಗುತ್ತಿದ್ದದ್ದು ಚೆಂಡೆ ಮದ್ದಳೆ, ಭಾಗವತಿಕೆ.
ಇದೀಗ ಆ ಕೆಲಸವನ್ನು ನನ್ನ ಚಿಕ್ಕಪ್ಪ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ತಲೆಮಾರಿನ ಕಲಾವಿದರು ಅಜ್ಜನ ಶಿಷ್ಯರಾದರೆ, ಹೊಸಬರಲ್ಲಿ ಹಲವರು ಚಿಕ್ಕಪ್ಪನ ಗರಡಿಯಲ್ಲಿ ಪಳಗಿದವರು.
**********
ಈಗ ನಮ್ಮೂರಿನ ಮನೆಗಳಲ್ಲಿ ಡಿಶ್ ಟಿ.ವಿ. ಬಂದಿದೆ. ಮೊಬ್ಬೈಲ್ ರೇಂಜ್ ಸಿಗುತ್ತಿದೆ. ಯುವಕರು ಬೆಂಗಳೂರಲ್ಲಿ ಸ್ಥಾಪಿತವಾಗಿದ್ದಾರೆ. ಎಲ್ಲಾ ಮುಂದುವರಿದ ಕರ್ನಾಟಕದ ಹಳ್ಳಿಗಳಂತೆ ನಮ್ಮ ಕರೋಪಾಡಿ ಆಧುನೀಕರಣಗೊಂಡಿದೆ.
***********
ಆದರೂ ಸಮಾಧಾನ ಎಂದರೆ ಇಡೀ ಗ್ರಾಮದ ಯಾವುದಾದರೂ ಒಂದು ಮನೆಯಲ್ಲಿ ದಿನಕ್ಕೊಂದು ಬಾರಿಯಾದರೂ ಚೆಂಡೆ ಪೆಟ್ಟು ಕೇಳಿಸುತ್ತದೆ. ಯಾವ ಕಲಾವಿದ ಇಂದು ಯಾವ ಮೇಳದಲ್ಲಿದ್ದಾನೆ ಎಂಬ ಚರ್ಚೆ ಇನ್ನೂ ನಡೆಯುತ್ತದೆ.
********
ಕಾಲ ಬದಲಾಗಿದೆ. ನಮ್ಮೂರಿನವರ ಮೂಡ್ ಬದಲಾಗಿಲ್ಲ. ಆಗುವುದೂ ಇಲ್ಲ. ಆತ ವಿಶ್ವದ ಯಾವ ಮೂಲೆಯಲ್ಲೇ ಇರಲಿ. ದೊಡ್ದ ಉದ್ಯೋಗದಲ್ಲಿರಲಿ, ಕರೋಪಾಡಿ ಗ್ರಾಮಕ್ಕೆ ಸಂಬಂಧಿಸಿದವನು ಹೌದೆಂದಾದರೆ..,
ಯಕ್ಷಗಾನಕ್ಕೆ ಕುತೂಹಲ ವ್ಯಕ್ತಪಡಿಸಿಯೇ ಸಿದ್ದ.
********
ಇದು ಕರೋಪಾಡಿಗರ ಕಲೆಯ ಪ್ರೀತಿ. ಕನ್ನಡವನ್ನೇ ಬಳಸುವ ಜಾನಪದ ಕಲೆ ಯಕ್ಷಗಾನ. ಹೀಗಾಗಿ ಯಕ್ಷಗಾನಪ್ರಿಯರೆಲ್ಲರೂ ಕನ್ನಡಪ್ರಿಯರು.
ಆದರೆ ಇಂದಿನ ಕಲಾವಿದರು ಯಕ್ಷಗಾನವನ್ನು ಉಳಿಸುತ್ತಿದ್ದಾರೆಯೆ? ಅಳಿದುಳಿದ ಪ್ರೀತಿಯನ್ನು ದ್ವೇಷಕ್ಕೆ ಮಾರ್ಪಡಿಸುತ್ತಿದ್ದಾರೆಯೆ?
ಯಕ್ಷಗಾನ ಬಲ್ಲವರು ಹೇಳಬೇಕು...
ಯಕ್ಷಗಾನಂ ಗೆಲ್ಗೆ!
(ಚಿತ್ರದಲ್ಲಿರುವವರು ನನ್ನ ಅಜ್ಜ ಮಾಂಬಾಡಿ ನಾರಾಯಣ ಭಾಗವತರು)
Subscribe to:
Comments (Atom)