Sunday, November 25, 2012

ವಿ‍ಷಮದ್ದು

ಕೆಟ್ಟ ಸದ್ದಿನ
ಉಸಿರು ಕಟ್ಟಿಸುವ ವಿ‍ಷಗಾಳಿ
ಸುಟ್ಟರೂ ಹೋಗಲ್ಲ
ಬಣ್ಣದ ಸುಡುಮದ್ದು
ಮೊನ್ನೆ ಬೆಳಕಿನ ಹಬ್ಬವೆಂದು
ಸದ್ದು ಮಾಡಿ ನೋಟು ಸುಟ್ಟರು!
ಬರೀ ದೀಪಾವಳಿಗೆಂದೇ ಅಲ್ಲ,
ವಿಜಯೋತ್ಸವಕ್ಕೂ ಬೇಡ
 ಸದ್ದಿನ ಗದ್ದಲ ಯಾರಿಗೂ
 ಕೇಡುಗಾಲ ಹೇಳಿ ಕೇಳಿ ಬರೋಲ್ಲ

Wednesday, February 29, 2012

ಪ್ರತಿಸ್ಪಂದನ


ಕಡಲಗರ್ಭದಲ್ಲಿ ಹುಡುಕಿದರೆ
ಬಿಸಿನೀರು ಹೆಪ್ಪುಗಟ್ಟಿದ ಕತೆ
ಸಿಗಬಹುದು..ಅವಮಾನದಿಂದ
ಕುಗ್ಗಿದ್ದೂ ಇರಬಹುದು
ಮೆಟ್ಟಿಲು ಮೆಟ್ಟದೆ ಮೆಟ್ಟಿರಬಹುದು
ಹೀಯಾಳಿಕೆ, ಅಪಹಾಸ್ಯದ
ನಂಜಿನ ಎಂಜಲು ಬಿದ್ದಿರಬಹುದು
ಅದಕ್ಕಾಗಿಯೋ ಏನೋ,,
ಉಪ್ಪು ಜಾಸ್ತಿಯಾದರೆ
ಕಕ್ಕಿಬಿಡುತ್ತಾರೆ, ಮೆಟ್ಟಲಾರದೆ
ಕುಸಿದು ಬೀಳುತ್ತಾರೆ!!

Tuesday, February 14, 2012

ಬೀದಿಯಲ್ಲೇ

ಅಡುಗೆ ಅನಿಲಕ್ಕೆ ಹೈಡಿಮಾಂಡು
ನ್ಯಾಯಕ್ಕಾಗಿ ಮಾತಾಡೋರೆಲ್ಲಾ
ಬೀದಿಗಿಳಿದರು ಆಂಬುಲೆನ್ಸ್ ನ್ನೂ ಬಿಡದೆ
ಒಂದು ಕಪ್ ಚಹಾಕ್ಕೆ ದಿಡೀರನೆ
ಬೆಲೆ ಏರಿತು, ಹಾಲು ಪೆಟ್ರೋಲು
ಕರೆಂಟಿಗೂ ಬೀದಿಗಿಳಿಯಲು ಯಾರಿಗೂ
ಪುರುಸೊತ್ತಿಲ್ಲ...! ಏಕೆಂದರೆ
ಎಲ್ಲ್ರೂ ಬೀದಿಯಲ್ಲೇ ಇದ್ದಾರೆ!!

........!!!

ಮಡೆಯಾದ ಮನದೊಳಗೆ
ತನುವಿಂದೇ ಚಿಂತೆ ದಾನವ
ದಾವಾನಲವೆಂಬ ಕೆಂಡಸಂಪಿಗೆ
ಕೊಟ್ಟ ಪ್ರೇಮ ಪ್ರೀತಿಯಂಥ
ಅನುಭವದ ದಿನಕ್ಕಿಂತ ತಂಗಾಳಿಯ
ಚಂದಿರನ ಹಾಯೆನಿಸೋ
ಬೆಳಕಿನ ಅಪ್ಪುಗೆಯ ಕನಸೇ
ಪ್ರತಿನಿತ್ಯ ಇದ್ದರೆ ಚೆನ್ನ