Monday, June 8, 2009

ಕನವರಿಕೆ 4

ಕಡಲ ಭೋರ್ಗರೆತ ಕವಿಕಿವಿಗಿಂಪು
ಬೆಸ್ತರಿಗೆ ಘೋರ ಕಿರಿಕಿರಿ
ಹಿರಿಹಿರಿ ಹಿಗ್ಗಿವೆ ಮತ್ಸ್ಯಸಂಕುಲ
ಉಕ್ಕೇರಿದ ನದಿಯಲ್ಲಿ ಮೀನುರಾಶಿ
ಹಿಡಿಯಲು ಎಂಟೆದೆ ಬೇಕು
ತೇಲಿಬರುವುದೇ, ತೆಂಗಿನಕಾಯಿ
ಹುಡುಕಹೊರಟರೆ ಪ್ರಾಣಾಪಾಯ
ಹೊಟ್ತೆಪಾಡು, ದಿನಕೂಲಿಯೂ ಮಾಯ
ರಾಜದರ್ಬಾರಿಗೆ ಪರ್ಸೆಂಟೇಜ್ ಪರಿಹಾರ
ಹುಯ್ಯೋ ಮಳೆರಾಯ ಯಾರಿಗುಂಟು
ಯಾರಿಗಿಲ್ಲ ಕೆಸರು, ಮುಳುಗುವ ಆಟ?
ಮಳೆದರ್ಬಾರು!