Tuesday, February 2, 2010

ಅಖಂಡ ಭಾರತ! ?



ಅಖಂಡ ಭಾರತ!
ಸಂಘಪರಿವಾರ ಪ್ರಸ್ತಾಪಿಸುವ ಭಾರತದ ಕಲ್ಪನೆಯ ಬಗ್ಗೆ ನಾನು ಹೇಳಲು ಹೊರಟಿಲ್ಲ. ಏಕೆಂದರೆ ಆ ‘ಗುರಿ’ ತಲುಪಲಂತೂ ಸಾಧ್ಯವೇ ಇಲ್ಲ. ನನಗೆ ಕಾಡುತ್ತಿರೋದು ಈಗಿರುವ ಭಾರತ ಅಖಂಡವಾಗಿದೆಯಾ ಎಂದು.
ಮುಂಬಯಿ ಮರಾಟಿಗರದ್ದು ಎಂಬ ಮಾತು ದಶಕಗಳ ಹಿಂದೆ ಹುಟ್ಟಿದಾಗ, ತಮಿಳನ್ನು ಅತಿಯಾಗಿ ಪ್ರೀತಿಸುವವರ ಸಂಖ್ಯೆ ಹೆಚ್ಹಾದಾಗಲೂ ಭಾರತ ಅಲ್ಲಾಡಲುಆರಂಭಿಸಿರಲಿಲ್ಲ. ಏಕೆಂದರೆ ಇವೆಲ್ಲದರ ಹಿಂದೆ ಪೊಲಿಟಿಕಲ್ ಅಜೆಂಡಾ ಮಾತ್ರ ಇತ್ತು. ಅದು ಸಾಧಿಸಿದ ಕೂಡಲೇ ಈ ಧ್ವನಿ ಕಮ್ಮಿಯಾಗುತ್ತಿತ್ತು. ಆದರೆ ಈಗ ನಮ್ಮನಮ್ಮಲ್ಲೇ ಇರೋ ಪ್ರತ್ಯೇಕತಾ ಭಾವನೆ ಮತ್ತಷ್ಟು ದಟ್ಟವಾಗಿದೆ.
ಒಂದು ಕ್ಷಣ ಯೋಚಿಸಿ. ಮುಂಬಯಿಯಿಂದ ತುಳು ಮಾತನಾಡುವವರು, ಹಿಂದಿ ಮಾತನಾಡುವವರು, ಕನ್ನಡ ಮಾತನಾಡುವವರು, ತಮಿಳು ಮಾತನಾಡುವವರು ಹಾಗೇ ಎದ್ದು ಹೋದರೆ ಏನಾಗಬಹುದು? ಮಲಯಾಳಿಗರು ಮಂಗಳೂರಿನ ವಾಣಿಜ್ಯ ಅಭಿವೃಧ್ಹಿಗೆ ತೆಲುಗರು ತಮಿಳರು ಬೆಂಗಳೂರಿನ ವಾಣಿಜ್ಯ ಅಭಿವೃಧ್ಹಿಗೆ ಕೊಡುಗೆ ಕೊಟ್ಟಿಲ್ಲವೇ? ಅವರನ್ನೆಲ್ಲಾ ಬೆತ್ತ ಹಿಡಿದು ಓಡಿಸಲು ಹೊರಟರೆ ಏನಾಗುತ್ತದೆ?
ಕಾಸರಗೋಡು ಕನ್ನಡನಾಡಿಗೆ ಸೇರಬೇಕು ಎಂದು ಉದ್ದುದ್ದ ಹೇಳಿಕೆ ಕೊಡುವ ಮಂದಿ ಖುದ್ದು ಅಲ್ಲಿಗೆ ಭೇಟಿ ಇತ್ತಿದ್ದಾರೆಯೆ? ಹಾಗೆ ನೋಡಿದರೆ ಕಾಸರಗೋಡು ಜಿಲ್ಲೆಯ ಕನ್ನಡ ಮಾತನಾಡುವವರನ್ನು ಕೇರಳ ಸರ್ಕಾರವೇ ಹೆಚ್ಹು ಗುರುತಿಸಿದೆ. ಯಕ್ಷಗಾನಕ್ಕೆ ಸರ್ಕಾರದ ಪ್ರೋತ್ಸಾಹ ಮೊದಲು ಸಿಕ್ಕಿದ್ದೇ ಕೇರಳದಿಂದ. ಇನ್ನು ಕನ್ನಡ ಮಾತನಾಡುವವರು, ತುಳು ಮಾತನಾಡುವವರು ಮಲಯಾಳಿಗಳೊಂದಿಗೆ ಅನ್ಯೋನ್ಯವಾಗಿಯೇ ಇದ್ದಾರೆ. ಸುಳ್ಯ, ಮಂಗಳೂರು, ಬಂಟ್ವಾಳ ತಾಲೂಕಿನ ಕೇರಳಕ್ಕೆ ತಾಗಿಕೊಂಡಿರುವವರ ಆಚಾರ,ವಿಚಾರಗಳಲ್ಲೂ ಕೇರಳ ಟಚ್ ಇದೆ. ಆದರೆ ಅವರೆಲ್ಲರೂ ಕನ್ನಡಿಗರೇ. ಆದರೂ ಕರ್ನಾಟಕ ಸರ್ಕಾರದ ಅಧೀನಕ್ಕೆ ಆ ಪ್ರದೇಶ ಬಂದು ಏನು ಸಾಧಿಸಿದ ಹಾಗಾಗುತ್ತದೆ?
ಇನ್ನು ಕರ್ನಾಟಕದ ಉತ್ತರ ಭಾಗದ ಮಹಾರಾಷ್ತ್ರಕ್ಕೆ ತಾಗಿಕೊಂಡಿರುವ ಪ್ರಾಂತ್ಯಗಳಲ್ಲಿ ಮರಾಟಿ ಪ್ರಭಾವ ಹೆಚ್ಹಾಗಿಯೇ ಇದೆ. ೧೯೯೦ರ ಸುಮಾರಿಗೆ ಗ್ರೇಟ್ ಮರಾಟಾ ಎಂಬ ಟೆಲಿ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಕಾರವಾರದ ಹೆಚ್ಹಿನ ಮನೆಗಳಲ್ಲಿ ಟಿ.ವಿ. ಮುಂದೆ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ಎಲ್ಲರಿಗೂ ಆ ಧಾರಾವಾಹಿ ನೋಡಲು ಅದೊಂಥರಾ ಖುಷಿ. ಆದರೆ ಅವರು ಹುಟ್ಟು ಕರ್ನಾಟಕದವರು. ಅವರನ್ನೆಲ್ಲಾ ಮಹಾರಾಷ್ತ್ರಕ್ಕೆ ಓಡಿಸಿ ಎಂದರೆ ಏನಾದೀತು?
ಇದೀಗ ಮಹಾರಾಷ್ಟ್ರದ ‘ಸೈನಿಕರು’ ಇಂಥದ್ದೊಂದು ಪ್ರತ್ಯೇಕತೆಯ ಕಿಚ್ಹು ಹಚ್ಹಿದ್ದಾರೆ. ಅವರನ್ನೇ ಮಾದರಿಯಾಗಿ ದೇಶದ ಇತರ ಭಾಗಗಳಲ್ಲಿ ಆಯಾ ಭಾಷೆಯ ‘ರಕ್ಷಣಾ’ ವಿಭಾಗದವರು ಕೋಲು, ಕತ್ತಿ ಹಿಡಿದು ಹೊರಟರೆ ಏನಾದೀತು?
ಬೆಳಗಾವಿ, ಕಾಸರಗೋಡು, ಮುಂಬಯಿ, ಬೆಂಗಳೂರು, ಡೆಲ್ಲಿ, ಮಂಗಳೂರು, ಕೋಲ್ಕತ್ತಾ, ಗೋವಾಗಳನ್ನು ಭಾಷೆಯ ಆಧಾದಲ್ಲೇ ನೋಡಿದರೆ, ಆಯಾಭಾಷಿಕರೇ ಅಲ್ಲಿರಬೇಕು ಎಂದು ಹೊರಟರೆ ಭಾರತ - ಮತ್ತೊಂದು U.S.S.R. ಆದೀತು.
ಇದು ಕೇವಲ ನನ್ನ ಅಭಿಪ್ರಾಯ.. ಸರಿಯೋ, ತಪ್ಪೋ ಗೊತ್ತಿಲ್ಲ.!!!