ಅಡುಗೆ ಅನಿಲಕ್ಕೆ ಹೈಡಿಮಾಂಡು
ನ್ಯಾಯಕ್ಕಾಗಿ ಮಾತಾಡೋರೆಲ್ಲಾ
ಬೀದಿಗಿಳಿದರು ಆಂಬುಲೆನ್ಸ್ ನ್ನೂ ಬಿಡದೆ
ಒಂದು ಕಪ್ ಚಹಾಕ್ಕೆ ದಿಡೀರನೆ
ಬೆಲೆ ಏರಿತು, ಹಾಲು ಪೆಟ್ರೋಲು
ಕರೆಂಟಿಗೂ ಬೀದಿಗಿಳಿಯಲು ಯಾರಿಗೂ
ಪುರುಸೊತ್ತಿಲ್ಲ...! ಏಕೆಂದರೆ
ಎಲ್ಲ್ರೂ ಬೀದಿಯಲ್ಲೇ ಇದ್ದಾರೆ!!
Tuesday, February 14, 2012
........!!!
ಮಡೆಯಾದ ಮನದೊಳಗೆ
ತನುವಿಂದೇ ಚಿಂತೆ ದಾನವ
ದಾವಾನಲವೆಂಬ ಕೆಂಡಸಂಪಿಗೆ
ಕೊಟ್ಟ ಪ್ರೇಮ ಪ್ರೀತಿಯಂಥ
ಅನುಭವದ ದಿನಕ್ಕಿಂತ ತಂಗಾಳಿಯ
ಚಂದಿರನ ಹಾಯೆನಿಸೋ
ಬೆಳಕಿನ ಅಪ್ಪುಗೆಯ ಕನಸೇ
ಪ್ರತಿನಿತ್ಯ ಇದ್ದರೆ ಚೆನ್ನ
ತನುವಿಂದೇ ಚಿಂತೆ ದಾನವ
ದಾವಾನಲವೆಂಬ ಕೆಂಡಸಂಪಿಗೆ
ಕೊಟ್ಟ ಪ್ರೇಮ ಪ್ರೀತಿಯಂಥ
ಅನುಭವದ ದಿನಕ್ಕಿಂತ ತಂಗಾಳಿಯ
ಚಂದಿರನ ಹಾಯೆನಿಸೋ
ಬೆಳಕಿನ ಅಪ್ಪುಗೆಯ ಕನಸೇ
ಪ್ರತಿನಿತ್ಯ ಇದ್ದರೆ ಚೆನ್ನ
Friday, August 26, 2011
ಕನಸು
ಮನುಷ್ಯನನ್ನೇ ನಂಬದ ಮನುಷ್ಯ,
ತನ್ನ ನೆರಳನ್ನು ಹೇಗೆ ನಂಬುತ್ತಾನೆ?
ಹೊರಗೆ ಥಳಕು, ಉರಿಬಿಸಿಲು
ಥಟ್ಟನೆ ಧೋಗರೆಯುವ ಕಳ್ಳಮಳೆಯಂತೆ
ಮನಸ್ಸು ಒಂದು ಮಾತು ಇನ್ನೊಂದು
...ಒಳಗೆ ಕೊಳಕು, ಕೊಳಕುಮಂಡಲ
ಇಂಥವರ ನೋಟವೇ ಬೇಡ ಗಣಪ,
ಒಳ್ಳೇ ನೆರಳು, ಬೆಳೆ ಕೊಡು, ಊಟ
ಸಿಗಲಿ ಬೇಡ ಮೋಸದಾಟ
ಎನ್ನುತ್ತಾನೆ ನಮ್ಮ ಕನಸುಗಾರ...
ತನ್ನ ನೆರಳನ್ನು ಹೇಗೆ ನಂಬುತ್ತಾನೆ?
ಹೊರಗೆ ಥಳಕು, ಉರಿಬಿಸಿಲು
ಥಟ್ಟನೆ ಧೋಗರೆಯುವ ಕಳ್ಳಮಳೆಯಂತೆ
ಮನಸ್ಸು ಒಂದು ಮಾತು ಇನ್ನೊಂದು
...ಒಳಗೆ ಕೊಳಕು, ಕೊಳಕುಮಂಡಲ
ಇಂಥವರ ನೋಟವೇ ಬೇಡ ಗಣಪ,
ಒಳ್ಳೇ ನೆರಳು, ಬೆಳೆ ಕೊಡು, ಊಟ
ಸಿಗಲಿ ಬೇಡ ಮೋಸದಾಟ
ಎನ್ನುತ್ತಾನೆ ನಮ್ಮ ಕನಸುಗಾರ...
Thursday, August 4, 2011
ಯಾರಿಗೇನಾಗಬೇಕು?
ಮಳೆಯ ಹನಿ ದಟ್ಟವಾಗುತ್ತಿದ್ದಂತೆ
ಕಣ್ಣು ಮಂಜಾಯಿತು.
ದೇಹಕ್ಕಾದರೆ ಗಾಯ ವಾಸಿಯಾಗುತ್ತೆ
ಮರ ಮುಳುಗಿದರೆ ಮತ್ತೊಂದು ಗಿಡ ನೆಟ್ಟು
ದೊಡ್ಡಮರವನ್ನಾಗಿ ಮಾಡಲು ಎಷ್ಟೊಂದು
ಬೆವರ ಹನಿ ಮಣ್ಣಾಗಿದೆಯೋ, ಗೊಬ್ಬರವೆಷ್ಟು
ಹಾಕಿದ್ದೇನೋ, ನಿಮಗೇನು ಗೊತ್ತು?
ಸುಮ್ಮನೆ ಮರ ಬಿದ್ದೊಡನೆ ಲೊಚಗುಟ್ಟುವವರೇ?
ಹೀಗೆಂದು ನಿಮ್ಮ ಮೇಲೆ ಬೇಜಾರಿಲ್ಲ ಎಲ್ಲಾ
ನನ್ನ ಪ್ರಾರಬ್ಧ. ಜೊತೆಗೆ ಪೇಟೆಯಲ್ಲೀಗ ಚಿನ್ನದ
ರೇಟ್ ದುಪ್ಪಟ್ಟು. ಅಡಕೆ ಸುಲಿಯಲೂ ಅಷ್ಟೇ...
ಪೇಟೆಗ ಮದ್ದಿಗೆ ಹೋದರೂ ಕಷ್ಟ
ನಮ್ಮ ದುಮ್ಮಾನ ಕೇಳಿ ಯಾರಿಗೇನಾಗಬೇಕು?
(ಇದು ಕರಾವಳಿಯಲ್ಲಿ ಕೃಷಿಯನ್ನೇ ನಂಬಿರುವ ಬಡವನೊಬ್ಬನ ಸ್ವಗತ)
ಕಣ್ಣು ಮಂಜಾಯಿತು.
ದೇಹಕ್ಕಾದರೆ ಗಾಯ ವಾಸಿಯಾಗುತ್ತೆ
ಮರ ಮುಳುಗಿದರೆ ಮತ್ತೊಂದು ಗಿಡ ನೆಟ್ಟು
ದೊಡ್ಡಮರವನ್ನಾಗಿ ಮಾಡಲು ಎಷ್ಟೊಂದು
ಬೆವರ ಹನಿ ಮಣ್ಣಾಗಿದೆಯೋ, ಗೊಬ್ಬರವೆಷ್ಟು
ಹಾಕಿದ್ದೇನೋ, ನಿಮಗೇನು ಗೊತ್ತು?
ಸುಮ್ಮನೆ ಮರ ಬಿದ್ದೊಡನೆ ಲೊಚಗುಟ್ಟುವವರೇ?
ಹೀಗೆಂದು ನಿಮ್ಮ ಮೇಲೆ ಬೇಜಾರಿಲ್ಲ ಎಲ್ಲಾ
ನನ್ನ ಪ್ರಾರಬ್ಧ. ಜೊತೆಗೆ ಪೇಟೆಯಲ್ಲೀಗ ಚಿನ್ನದ
ರೇಟ್ ದುಪ್ಪಟ್ಟು. ಅಡಕೆ ಸುಲಿಯಲೂ ಅಷ್ಟೇ...
ಪೇಟೆಗ ಮದ್ದಿಗೆ ಹೋದರೂ ಕಷ್ಟ
ನಮ್ಮ ದುಮ್ಮಾನ ಕೇಳಿ ಯಾರಿಗೇನಾಗಬೇಕು?
(ಇದು ಕರಾವಳಿಯಲ್ಲಿ ಕೃಷಿಯನ್ನೇ ನಂಬಿರುವ ಬಡವನೊಬ್ಬನ ಸ್ವಗತ)
Sunday, March 6, 2011
ಪಂಜೆ ಮಂಗೇಶರಾಯರ ಮರೆತೇ ಬಿಟ್ಟರು
ಒಂದೆಡೆ ಅದ್ದೂರಿ ಸಾಹಿತ್ಯ ಸಮ್ಮೇಳನಕ್ಕೆ ಕೋಟಿ ಕೋಟಿ ವ್ಯಯವಾಗುತ್ತದೆ. ಮತ್ತೊಂದೆಡೆ ಕವಿಯೊಬ್ಬರ ನೆನಪಿನ ಸ್ಮಾರಕಕ್ಕೆ ಘೋಷಣೆಯಾದ ಹಣ ಬಿಡುಗಡೆ ಮಾಡಲೂ ಮೀನಮೇಷ ಎಣಿಸಲಾಗುತ್ತದೆ.ಅವರ ಕೊಡುಗೆಯ ಕೖತಜ್ಞತೆಯನ್ನು ಮರೆತುಬಿಡುವ ಹಂತಕ್ಕೆ ಬಂದ ನಮ್ಮ ವ್ಯವಸ್ಥೆಗೆ ಸ್ಪಷ್ಟ ಉದಾಹರಣೆ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿಮಾ೯ಣ.
2007ರ ರಾಜ್ಯ ಬಜೆಟ್್ನಲ್ಲಿ ಅಂದು ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಪಂಜೆ ಮಂಗೇಶರಾಯರ ನೆನಪಿಗೆ ಅವರ ಹುಟ್ಟೂರಲ್ಲಿ ಸ್ಮಾರಕ ಭವನ ನಿಮಿ೯ಸಲೆಂದು 50 ಲಕ್ಷ ರುಪಾಯಿ ಒದಗಿಸಿದ್ದೇನೆ ಎಂದು ಹೇಳಿದರು. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಗಳೂ ಬಂದವು. ನಾಲ್ಕು ವಷ೯ ಕಳೆದವು. ಯಡಿಯೂರಪ್ಪ ಮತ್ತೆ ಮೂರು ಬಜೆಟ್್ ಮಂಡಿಸಿದರು. ಆದರೆ 50 ಲಕ್ಷ ರುಪಾಯಿ ಬಿಡಿ, 5 ಲಕ್ಷ ರುಪಾಯಿಯೂ ಘಟ್ಟ ಇಳಿದು ಪಂಜೆ ಹುಟ್ಟಿದ ಊರಾದ ಬಂಟ್ವಾಳಕ್ಕೆ ಬರಲಿಲ್ಲ.
ಬಂಟ್ವಾಳವೇ ಏಕೆ?
ಪಂಜೆ ಮಂಗೇಶರಾಯರು ಹುಟ್ಟಿದ್ದು ಬಂಟ್ವಾಳದಲ್ಲಿ. ಈಗ ಬಂಟ್ವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವಸತಿಗೖಹ ಪಂಜೆಯವರ ಮನೆಯಾಗಿತ್ತು. ಅಲ್ಲಿ ಈಗಲೂ ಪಂಜೆ ನೆನಪಿಸಲು ಫಲಕವೊಂದಿದೆ. ಹೀಗಾಗಿ ಪಂಜೆ ಮಂಗೇಶರಾಯರ ಸ್ಮಾರಕ ಭವನ ಬಂಟ್ವಾಳದಲ್ಲಿ ನಿಮಿ೯ಸಿದರೆ ಅದು ಅಥ೯ಪೂಣ೯ವಾಗುತ್ತದೆ.
ಜಾಗ ಇದೆ,ಹಣ ಇಲ್ಲ!
ಬಜೆಟ್್ನಲ್ಲಿ ಘೋಷಣೆಯಾದ ಕೂಡಲೇ ಪಂಜೆ ಸ್ಮಾರಕ ಭವನ ನಿಮಿ೯ಸಲೆಂದು ಪಂಜೆ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಸಮೀಪ ಬಿ.ಸಿ.ರೋಡ್್ನ ಗೂಡಿನಬಳಿ ಎಂಬಲ್ಲಿ ಜಾಗ ನಿಗದಿಪಡಿಸಲಾಯಿತು. ಅಲ್ಲಿ ರಂಗಮಂದಿರವೊಂದನ್ನು ನಿಮಿ೯ಸುವ ಇರಾದೆಯೂ ಇತ್ತು.
ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಜೊತೆಗೆ ಅಕ್ಟೋಬರ್್ 2007ರಲ್ಲಿ ಬಂದಿದ್ದ ಉಪಮುಖ್ಯಮಂತ್ರಿ ಯಡಿಯೂರಪ್ಪ, ಕೋಟಿ ವೆಚ್ಚಗಳ ಹಲವು ಅಭಿವೖದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದರು. ಅವುಗಳಲ್ಲಿ ಪಂಜೆ ಮಂಗೇಶರಾಯ ಸ್ಮಾರಕ ಭವನವೂ ಒಂದು.ಆದರೆ ಬಂಟ್ವಾಳದ ಹಲವಾರು ಕಲ್ಲುಗಳ ಜೊತೆ ಅದೂ ಸೇರಿಹೋಯಿತು. ಬಂಟ್ವಾಳದವರೇ ಆದ ಹಿರಿಯ ಸಾಹಿತಿ ಏಯ೯ ಲಕ್ಷ್ಮೀನಾರಾಯಣ ಆಳ್ವ ಅವರು 2007ರಲ್ಲಿ ಆಗಿನ ತಾಪಂ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದು,ಪಂಜೆ ಭವನಕ್ಕೆ ನಿಗದಿಯಾದ ಜಾಗಕ್ಕಿಂದ ಬಂಟ್ವಾಳದ ಕೇಂದ್ರಸ್ಥಾನವಾದ ಬಿ.ಸಿ.ರೋಡ್್ನಲ್ಲೇ ಮಾಡಿದರೆ ಸೂಕ್ತ. ತಾಪಂ ವತಿಯಿಂದ ಭವ್ಯ ರಂಗಮಂದಿರವನ್ನು ನಿಮಿ೯ಸಲು ಬೇಕಾದ ಜಾಗ ಒದಗಿಸಬೇಕು ಎಂದು ವಿವರಿಸಿದರು.ಅದಕ್ಕೆ ಸ್ಪಂದಿಸಿದ ಅಂದಿನ ತಾಪಂ, ಈ ಕುರಿತು ಅಕ್ಟೋಬರ್್ 10, 2007ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿಣ೯ಯ ಕೈಗೊಂಡು, ಬಿ.ಸಿ.ರೋಡ್್ನ ಆಶ್ರಮ ಶಾಲೆಯ ಬಳಿ 30 ಸೆಂಟ್ಸ್್ ಜಾಗವನ್ನು ಒದಗಿಸುವ ಬಗ್ಗೆ ತೀಮಾ೯ನಿಸಿತು. ಜಾಗ ಒದಗಿಸುವುದು ಮಾತ್ರವಲ್ಲ, ರಂಗಮಂದಿರವನ್ನು ಕಟ್ಟಿದರೆ ಅದರ ನಿವ೯ಹಣೆ ತಾಪಂ ಮಾಡುವುದು ಎಂದು ನಿಣ೯ಯವೂ ಆಗಿತ್ತು. 2008 ಜನವರಿ 25ರಂದು ಕನ್ನಡ ಮತ್ತು ಸಂಸ್ಕೖತಿ ಇಲಾಖೆಗೆ ಒಟ್ಟು 30 ಸೆಂಟ್ಸ್ ಜಾಗವನ್ನು ತಾಪಂ ನೀಡಿತು.
ಚಿಕ್ಕಾಸೂ ಅನುದಾನ ಇಲ್ಲದೆ ಕಟ್ಟಡ ಯಾರು ಕಟ್ಟುತ್ತಾರೆ? ಹಾಗೇ ಆಯಿತು. ಘೋಷಣೆಯಾದ ಹಣ ಬರಲೇ ಇಲ್ಲ. ಸಾಹಿತ್ಯ ವೇದಿಕೆಗಳಲ್ಲಿ ಮಾತ್ರ ಸಾಹಿತಿಗಳನ್ನು ಸ್ಮರಿಸುವವರು ಪಂಜೆಯವರು ಯಾರೆಂಬುದನ್ನೇ ಮರೆತರು. ಹಣ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೖತಿ ಇಲಾಖೆಯೂ ಕೈಚೆಲ್ಲಿ ಕುಳಿತಿತು. ಇದರಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಆಡಳಿತ ಯಂತ್ರದ ನಿಲ೯ಕ್ಷ್ಯಕ್ಕೆ ಸಾಹಿತ್ಯಪ್ರೇಮಿಗಳ ಅವಜ್ಞೆಯೂ ಸೇರಿ ಕನ್ನಡದ ಅಗಲಿದ ಹಿರಿಯ ಕವಿಗೆ ಅವಮಾನ ಆಗಿರುವುದಂತೂ ನಿಜ.
2007ರ ರಾಜ್ಯ ಬಜೆಟ್್ನಲ್ಲಿ ಅಂದು ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಪಂಜೆ ಮಂಗೇಶರಾಯರ ನೆನಪಿಗೆ ಅವರ ಹುಟ್ಟೂರಲ್ಲಿ ಸ್ಮಾರಕ ಭವನ ನಿಮಿ೯ಸಲೆಂದು 50 ಲಕ್ಷ ರುಪಾಯಿ ಒದಗಿಸಿದ್ದೇನೆ ಎಂದು ಹೇಳಿದರು. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಗಳೂ ಬಂದವು. ನಾಲ್ಕು ವಷ೯ ಕಳೆದವು. ಯಡಿಯೂರಪ್ಪ ಮತ್ತೆ ಮೂರು ಬಜೆಟ್್ ಮಂಡಿಸಿದರು. ಆದರೆ 50 ಲಕ್ಷ ರುಪಾಯಿ ಬಿಡಿ, 5 ಲಕ್ಷ ರುಪಾಯಿಯೂ ಘಟ್ಟ ಇಳಿದು ಪಂಜೆ ಹುಟ್ಟಿದ ಊರಾದ ಬಂಟ್ವಾಳಕ್ಕೆ ಬರಲಿಲ್ಲ.
ಬಂಟ್ವಾಳವೇ ಏಕೆ?
ಪಂಜೆ ಮಂಗೇಶರಾಯರು ಹುಟ್ಟಿದ್ದು ಬಂಟ್ವಾಳದಲ್ಲಿ. ಈಗ ಬಂಟ್ವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವಸತಿಗೖಹ ಪಂಜೆಯವರ ಮನೆಯಾಗಿತ್ತು. ಅಲ್ಲಿ ಈಗಲೂ ಪಂಜೆ ನೆನಪಿಸಲು ಫಲಕವೊಂದಿದೆ. ಹೀಗಾಗಿ ಪಂಜೆ ಮಂಗೇಶರಾಯರ ಸ್ಮಾರಕ ಭವನ ಬಂಟ್ವಾಳದಲ್ಲಿ ನಿಮಿ೯ಸಿದರೆ ಅದು ಅಥ೯ಪೂಣ೯ವಾಗುತ್ತದೆ.
ಜಾಗ ಇದೆ,ಹಣ ಇಲ್ಲ!
ಬಜೆಟ್್ನಲ್ಲಿ ಘೋಷಣೆಯಾದ ಕೂಡಲೇ ಪಂಜೆ ಸ್ಮಾರಕ ಭವನ ನಿಮಿ೯ಸಲೆಂದು ಪಂಜೆ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಸಮೀಪ ಬಿ.ಸಿ.ರೋಡ್್ನ ಗೂಡಿನಬಳಿ ಎಂಬಲ್ಲಿ ಜಾಗ ನಿಗದಿಪಡಿಸಲಾಯಿತು. ಅಲ್ಲಿ ರಂಗಮಂದಿರವೊಂದನ್ನು ನಿಮಿ೯ಸುವ ಇರಾದೆಯೂ ಇತ್ತು.
ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಜೊತೆಗೆ ಅಕ್ಟೋಬರ್್ 2007ರಲ್ಲಿ ಬಂದಿದ್ದ ಉಪಮುಖ್ಯಮಂತ್ರಿ ಯಡಿಯೂರಪ್ಪ, ಕೋಟಿ ವೆಚ್ಚಗಳ ಹಲವು ಅಭಿವೖದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದರು. ಅವುಗಳಲ್ಲಿ ಪಂಜೆ ಮಂಗೇಶರಾಯ ಸ್ಮಾರಕ ಭವನವೂ ಒಂದು.ಆದರೆ ಬಂಟ್ವಾಳದ ಹಲವಾರು ಕಲ್ಲುಗಳ ಜೊತೆ ಅದೂ ಸೇರಿಹೋಯಿತು. ಬಂಟ್ವಾಳದವರೇ ಆದ ಹಿರಿಯ ಸಾಹಿತಿ ಏಯ೯ ಲಕ್ಷ್ಮೀನಾರಾಯಣ ಆಳ್ವ ಅವರು 2007ರಲ್ಲಿ ಆಗಿನ ತಾಪಂ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದು,ಪಂಜೆ ಭವನಕ್ಕೆ ನಿಗದಿಯಾದ ಜಾಗಕ್ಕಿಂದ ಬಂಟ್ವಾಳದ ಕೇಂದ್ರಸ್ಥಾನವಾದ ಬಿ.ಸಿ.ರೋಡ್್ನಲ್ಲೇ ಮಾಡಿದರೆ ಸೂಕ್ತ. ತಾಪಂ ವತಿಯಿಂದ ಭವ್ಯ ರಂಗಮಂದಿರವನ್ನು ನಿಮಿ೯ಸಲು ಬೇಕಾದ ಜಾಗ ಒದಗಿಸಬೇಕು ಎಂದು ವಿವರಿಸಿದರು.ಅದಕ್ಕೆ ಸ್ಪಂದಿಸಿದ ಅಂದಿನ ತಾಪಂ, ಈ ಕುರಿತು ಅಕ್ಟೋಬರ್್ 10, 2007ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿಣ೯ಯ ಕೈಗೊಂಡು, ಬಿ.ಸಿ.ರೋಡ್್ನ ಆಶ್ರಮ ಶಾಲೆಯ ಬಳಿ 30 ಸೆಂಟ್ಸ್್ ಜಾಗವನ್ನು ಒದಗಿಸುವ ಬಗ್ಗೆ ತೀಮಾ೯ನಿಸಿತು. ಜಾಗ ಒದಗಿಸುವುದು ಮಾತ್ರವಲ್ಲ, ರಂಗಮಂದಿರವನ್ನು ಕಟ್ಟಿದರೆ ಅದರ ನಿವ೯ಹಣೆ ತಾಪಂ ಮಾಡುವುದು ಎಂದು ನಿಣ೯ಯವೂ ಆಗಿತ್ತು. 2008 ಜನವರಿ 25ರಂದು ಕನ್ನಡ ಮತ್ತು ಸಂಸ್ಕೖತಿ ಇಲಾಖೆಗೆ ಒಟ್ಟು 30 ಸೆಂಟ್ಸ್ ಜಾಗವನ್ನು ತಾಪಂ ನೀಡಿತು.
ಚಿಕ್ಕಾಸೂ ಅನುದಾನ ಇಲ್ಲದೆ ಕಟ್ಟಡ ಯಾರು ಕಟ್ಟುತ್ತಾರೆ? ಹಾಗೇ ಆಯಿತು. ಘೋಷಣೆಯಾದ ಹಣ ಬರಲೇ ಇಲ್ಲ. ಸಾಹಿತ್ಯ ವೇದಿಕೆಗಳಲ್ಲಿ ಮಾತ್ರ ಸಾಹಿತಿಗಳನ್ನು ಸ್ಮರಿಸುವವರು ಪಂಜೆಯವರು ಯಾರೆಂಬುದನ್ನೇ ಮರೆತರು. ಹಣ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೖತಿ ಇಲಾಖೆಯೂ ಕೈಚೆಲ್ಲಿ ಕುಳಿತಿತು. ಇದರಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಆಡಳಿತ ಯಂತ್ರದ ನಿಲ೯ಕ್ಷ್ಯಕ್ಕೆ ಸಾಹಿತ್ಯಪ್ರೇಮಿಗಳ ಅವಜ್ಞೆಯೂ ಸೇರಿ ಕನ್ನಡದ ಅಗಲಿದ ಹಿರಿಯ ಕವಿಗೆ ಅವಮಾನ ಆಗಿರುವುದಂತೂ ನಿಜ.
Thursday, December 9, 2010
ಮೇಲೇರಿದ ಮೇಲೆ,
ಗಾಳಿಪಟ ಎಷ್ಟು ಚೆಂದ?
ಅದರ ಬಣ್ಣವೇನು? ಅಂದವೇನು?
ಗಾಳಿಪಟ ಹಾರುವ ಮೊದಲು ಹೇಳುತ್ತಲೂ ಇತ್ತು
ಓ ದಾರವೇ..ನೀನಿಲ್ಲದೆ ನಾನಿಲ್ಲ
ಹಾರಿದ ಮೇಲೆ ಹೇಳಿತು ನಾನು ಎತ್ತರದಲ್ಲಿದ್ದೇನೆ..
ಮತ್ತೆ ಯಾಕೆ ಬೇಕು ಸೂತ್ರ,
(ಅ)ಮೇಲೇರಿದ ಮೇಲೆ ಕೆಳಗಿದ್ದವರು ಕಾಣ್ತಾರಾ?
ಅದೇ ಗತಿ ಸೂತ್ರಕ್ಕಾಯ್ತು...ಮತದಾರನಂತೆ,
ಬಡ ರೈತನಂತೆ, ಥ್ಯಾಂಕ್ಸ್ ಲೆಸ್ ಕೆಲಸ ಮಾಡೋ ಶ್ರಮಜೀವಿಯಂತೆ
ಅದರ ಬಣ್ಣವೇನು? ಅಂದವೇನು?
ಗಾಳಿಪಟ ಹಾರುವ ಮೊದಲು ಹೇಳುತ್ತಲೂ ಇತ್ತು
ಓ ದಾರವೇ..ನೀನಿಲ್ಲದೆ ನಾನಿಲ್ಲ
ಹಾರಿದ ಮೇಲೆ ಹೇಳಿತು ನಾನು ಎತ್ತರದಲ್ಲಿದ್ದೇನೆ..
ಮತ್ತೆ ಯಾಕೆ ಬೇಕು ಸೂತ್ರ,
(ಅ)ಮೇಲೇರಿದ ಮೇಲೆ ಕೆಳಗಿದ್ದವರು ಕಾಣ್ತಾರಾ?
ಅದೇ ಗತಿ ಸೂತ್ರಕ್ಕಾಯ್ತು...ಮತದಾರನಂತೆ,
ಬಡ ರೈತನಂತೆ, ಥ್ಯಾಂಕ್ಸ್ ಲೆಸ್ ಕೆಲಸ ಮಾಡೋ ಶ್ರಮಜೀವಿಯಂತೆ
Monday, November 1, 2010
ಯಾರಿಗೇನು?
ಯಾವ ತಿಂಗಳು ಬಂದರೆ ಯಾರಿಗೇನು?
ಯಾವ ರಾಜ ಆಳಿದರೆ ಯಾರಿಗೇನು?
ಪ್ರತಿದಿನವೂ ನಮ್ಮ ತಲೇ ಮೇಲೆ ನಮ್ಮದೇ ಕೈ
ಯಾರದೋ ತಪ್ಪಿಗೆ ಯಾರಿಗೋ ಕಪ್ಪ
ತಾನು ಕಳ್ಳ ಪರರ ನಂಬ ಎಂಬ
ಚೋರರ ರಾಜ್ಯದ ಪ್ರಜೆ ಪ್ರಾಮಾಣಿಕನಾದರೆ
ಅವನಿಗೆ ಪ್ರತಿದಿನವೂ ಯಮಗಂಡಕಾಲ
ಯಾವ ರಾಜ ಆಳಿದರೆ ಯಾರಿಗೇನು?
ಪ್ರತಿದಿನವೂ ನಮ್ಮ ತಲೇ ಮೇಲೆ ನಮ್ಮದೇ ಕೈ
ಯಾರದೋ ತಪ್ಪಿಗೆ ಯಾರಿಗೋ ಕಪ್ಪ
ತಾನು ಕಳ್ಳ ಪರರ ನಂಬ ಎಂಬ
ಚೋರರ ರಾಜ್ಯದ ಪ್ರಜೆ ಪ್ರಾಮಾಣಿಕನಾದರೆ
ಅವನಿಗೆ ಪ್ರತಿದಿನವೂ ಯಮಗಂಡಕಾಲ
Subscribe to:
Comments (Atom)