Wednesday, February 29, 2012

ಪ್ರತಿಸ್ಪಂದನ


ಕಡಲಗರ್ಭದಲ್ಲಿ ಹುಡುಕಿದರೆ
ಬಿಸಿನೀರು ಹೆಪ್ಪುಗಟ್ಟಿದ ಕತೆ
ಸಿಗಬಹುದು..ಅವಮಾನದಿಂದ
ಕುಗ್ಗಿದ್ದೂ ಇರಬಹುದು
ಮೆಟ್ಟಿಲು ಮೆಟ್ಟದೆ ಮೆಟ್ಟಿರಬಹುದು
ಹೀಯಾಳಿಕೆ, ಅಪಹಾಸ್ಯದ
ನಂಜಿನ ಎಂಜಲು ಬಿದ್ದಿರಬಹುದು
ಅದಕ್ಕಾಗಿಯೋ ಏನೋ,,
ಉಪ್ಪು ಜಾಸ್ತಿಯಾದರೆ
ಕಕ್ಕಿಬಿಡುತ್ತಾರೆ, ಮೆಟ್ಟಲಾರದೆ
ಕುಸಿದು ಬೀಳುತ್ತಾರೆ!!

1 comment:

Karthik Kamanna said...

ಅರ್ಥ ತುಂಬಿದ ಕವನ :)